ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ನೂತನ ತಾಲೂಕು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಕೊಪ್ಪಳ 01: ಶರಣರ ವಚನಗಳನ್ನ ಬರೀ ಮಾತನಾಡುವದಲ್ಲ ಅವುಗಳನ್ನು ಪಾಲಿಸುತ್ತ ಸಮಾಜದಲ್ಲಿ ಸಮಾನತೆ, ಸಹೋದರತ್ವ, ಸಾಮರಸ್ಯದ ಬೆಸುಗೆಯೊಂದಿಗೆ ಬೆರೆತಾಗ ಇತರ ಜಾತಿ ಧರ್ಮದವರೊಂದಿಗೆ ಕೂಡಿ ಬಾಳಲು ಸಾಧ್ಯ, ಇದಕ್ಕೆ ನಮ್ಮ ವಚನ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ರಾಜ್ಯಾಧ್ಯಕ್ಷ ಎನ್. ತಿಮ್ಮಪ್ಪ ನುಡಿದರು.
ಅವರು ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಬೆಂಗಳೂರು ಹಾಗೂ ತಾಲೂಕ ಮತ್ತು ಜಿಲ್ಲಾ ಘಟಕ ಕೊಪ್ಪಳ, ವಿಶಾಲ ಪ್ರಕಾಶನ ಮಾದಿನೂರು, ಸಿರಿಗನ್ನಡ ವೇದಿಕೆ ತಾಲೂಕು ಮತ್ತು ಜಿಲ್ಲಾ ಘಟಕ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ನೂತನ ತಾಲೂಕು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ‘ಕಾಯಕ ರತ್ನ ಪ್ರಶಸಿ'್ತ ಪ್ರಧಾನ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಹಿರಿಯ ಸಾಹಿತಿಗಳಾದ ಮಾ.ಚಿ.ಕೃಷ್ಣ ರವರು ಜಿ.ಎಸ್. ಗೋನಾಳರ ‘ಮಾತು ಮಾಣಿಕ್ಯ' ಕೃತಿ ಲೋಕಾರೆ್ಣ ಮಾಡಿ ಮಾತನಾಡಿ, ಗೋನಾಳರು ತಮ್ಮ ನಿಷ್ಠೂರವಾದ ಬರಹದ ಮೂಲಕ ಜನರನ್ನು ಜಾಗೃತಗೋಳಿಸುವ ಬಹು ಎತ್ತರದ ಲೇಖಕರಾಗಿದ್ದು ಅವರನ್ನು ನಾನು ಸಾಹಿತ್ಯ ಸಾಮ್ರಾಟರೆಂದೇ ಕರೆಯುತ್ತೇನೆ. ಚಿಂತನಾಶೀಲ ಬರಹಗಾರರಾದ ಗೋನಾಳರು ಬರೆದ 17 ಪುಸ್ತಕಗಳನ್ನು ಆಸಕ್ತರು ಖರಿದಿಸಿ ಓದಲೇಬೇಕಾಗಿದೆ. ಆಗ ಅವರ ಅಂತರಂಗದ ನುಡಿಗಳು ನಮಗೆ ಹತ್ತಿರವಾಗುತ್ತವೆ. ಪಠ್ಯ ಪುಸ್ತಕಗಳಲ್ಲಿ ಇವರ ಬರಹ ದಾಖಲಾಗಬೇಕೆಂದು ಮಾತನಾಡಿದರು.
ಹಿರಿಯ ಪತ್ರಕರ್ತ, ಚಲನ ಚಿತ್ರ ನಿದೇಶಕ ರಮೇಶ ಸುರ್ವೆ ರವರು ‘ಬಹುಮುಖ ವ್ಯಕ್ತಿತ್ವದ ಜಿ.ಎಸ್.ಗೋನಾಳರು' ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ವೈಚಾರಿಕ ಚಿಂತನೆಯುಳ್ಳ ಬರಹಗಾರ ಗೋನಾಳರು ಮುಂದೆ ನಾಡಿನ ಬಹುದೊಡ್ಡ ಲೇಖಕರಾಗಿ ಹೊರಹೊಮ್ಮಲಿದ್ದಾರೆ.
ಅವರು ತಮ್ಮ ವಿಶಾಲ ಪ್ರಕಾಶನದ ಮೂಲಕ ಹಲವಾರು ಯುವ ಕವಿಗಳನ್ನು ಬರಹಗಾರರನ್ನು ಗುರುತಿಸಿ ಬೆಳಕಿಗೆ ತಂದಿದ್ದಾರೆ. ಅವರಿಂದ ಇನ್ನೂ ಗಂಭೀರವಾದ ಪುಸ್ತಕಗಳು ಬರಲಿ ಎಂದು ಆಶಿಸಿ ಮಾತನಾಡಿದರು. ಜೊತೆಗೆ ಅಬ್ದುಲ್ ರೇಹಮಾನ್ ಬಿದರಕುಂದಿ, ಶ್ರೀಮತಿ ರುದ್ರಮ್ಮ ಆಸಿನಾಳ, ಬಸವರಾಜ ಪಾಲ್ಕಿ, ಮಹೇಶಬಾಬು ಸುರ್ವೆ, ವಿಜಯಕುಮಾರ ಕವಲೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ 29 ಸಾಧಕರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಆಧುನಿಕ ವಚನ ರಚನೆ ಸ್ಪಧೆಯಲ್ಲಿ ಭಾಗವಹಿಸಿದ 33 ವಚನಕಾರರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಿರೇಮಠ ಮೈನಹಳ್ಳಿ ಬಿಕ್ಕನಹಳ್ಳಿ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನಾಗರಾಜ್ ದಂಡೂತಿ ವಹಿಸಿದ್ದರು. ಪ್ರಾರ್ಥನೆಯನ್ನು ಮಾಹಾಂತಯ್ಯ ಶಾಸ್ರಿ ಮತ್ತು ಕನಕಾಪುರ ಶಾಲೆಯ ಮಕ್ಕಳು ವಚನ ಗಾಯನಕ್ಕೆ ನೃತ್ಯ ರೂಪಕವನ್ನು ಮಾಡಿದರು. ಪ್ರಾಸ್ತಾವಿಕವಾಗಿ ಪ್ರೋ. ಶರಣಬಸಪ್ಪ ಬಿಳೆಯಲೆ ಮಾಡಿದರು. ಸ್ವಾಗತವನ್ನು ಡಾ. ಶಿವಬಸಪ್ಪ ಮಸ್ಕಿ ಕೋರಿದರೆ, ನಿರುಪಣೆಯನ್ನು ಉಮೇಶ ಸುರ್ವೆ ಮತ್ತು ಸುರೇಶ ಕುಂಬಾರ ನೆರವೇರಿಸಿದರು. ತಾಲೂಕ ಘಟಕದ ಅಧ್ಯಕ್ಷರಾದ ಮೈಲಾರೆಪ್ಪ ಉಂಕಿ ವಂದನಾರೆ್ಣಯನ್ನು ಸಲ್ಲಿಸಿದರು.