ಒಳಚರಂಡಿ ಬ್ಲಾಕ್ ಆಗಿ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು: ಕ್ಯಾರೆ ಅನ್ನದ ಅಧಿಕಾರಿಗಳು

ಜಮಖಂಡಿ 03: ತಾಲೂಕಿನ ಹುನ್ನೂರಿನ ವಾರ್ಡ ನಂ2 ಹನುಮಾನ ಗಲ್ಲಿಯಲ್ಲಿ ದ್ವಾರ ಬಾಗಿಲಿನ ಒಳಚರಂಡಿ ಬ್ಲಾಕ್ ಆಗಿ ಕೊಳಚೆ ನೀರು ರಸ್ತೆಯ ಮೇಲೆ ಹರಿದು ರೋಗಗಳಿಗೆೆ ದಾರಿಯಾಗುವುದಲ್ಲದೆ ಮನೆ ಅಂಗಳದಲ್ಲಿ ನುಗ್ಗುತ್ತಿದ್ದು, ಜನರ ಓಡಾಟಕ್ಕೆ ತೊಂದರೆ ಉಂಟಾಗಿದೆ. ತೊಂದರೆ ಬಗ್ಗೆ ಗ್ರಾಮ ಪಂಚಾಯತಿಗೆ ಅನೇಕ ಮನವಿಗಳನ್ನು ನೀಡಿದರು ಕ್ಯಾರೆ ಅನ್ನದ ಅಧ್ಯಕ್ಷ ಹಾಗೂ ಅಧಿಕಾರಿಗಳ ನಿರ್ಲಕ್ಷಕ್ಕೆ ಜನರು ಬೇಸತ್ತು ಹೋಗಿದ್ದಾರೆ. 

ಕೊಳಚೆ ಚರಂಡಿ ನೀರು ಗಬ್ಬು ನಾರುತ್ತಿದ್ದು ಹಿರಿಯ ನಾಗರಿಕರು, ತಾಯಂದಿರು, ಮಕ್ಕಳು ತಿರುಗಾಡಲು ಪರದಾಡುವಂತಾಗಿದೆ. ಅಧ್ಯಕ್ಷರು ವಾರ್ಡ 2 ರ ಸದಸ್ಯರಿದ್ದರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ. ಈ ಕೂಡಲೆ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಇಲ್ಲವಾದಲ್ಲಿ ಆಕ್ರೋಶಭರಿತ ಉತ್ತರ ನೀಡಬೇಕಾಗುತ್ತದೆಂದು ಅಲ್ಲಿನ ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ.