ಎಸ್‌. ಬಿ. ತೊರಗಲ್ಲರಿಗೆ ಸನ್ಮಾನ

ಯರಗಟ್ಟಿ 03: ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಧಾನ ಗುರುಗಳಾದ ಎಸ್‌. ಬಿ. ತೊರಗಲ್ಲ ಅವರು ಬಸವ ಕಾಯಕ ರತ್ನ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರನ್ನು ಗ್ರಾಮದ ಸಾರ್ವಜನಿಕರಿಂದ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ  ಶಾಲಾ ಅಭಿವೃದ್ಧಿಗೆ ಸಹಕರಿಸಿದ ಎಂ.ಸಿ.ಗೋಡಿ, ವಿಠ್ಠಲ ಭಾಂಗಿ ಅವರನ್ನು ಸತ್ಕರಿಸಲಾಯಿತು. ಈ ವೇಳೆ  ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಅಧ್ಯಕ್ಷತೆಯನ್ನು ಮಲ್ಲಯ್ಯ ಹಿರೇಮಠ, ಮುಖ್ಯ ಅತಿಥಿಗಳಾಗಿ  ಪ್ರಾಂಶುಪಾಲ ವಿವೇಕ ದಿವಟೆ, ಉಪ ಪ್ರಾಂಶುಪಾಲ ಎಂ. ಕೆ. ಹಾದಿಮನಿ, ಉಮೇಶ ಮಾಗುಂಡನವರ, ಈರಣ್ಣ ಹೊಸಮನಿ, ಯಮನವ್ವ ಜಕ್ಕಣ್ಣವರ ಸೇರಿದಂತೆ ಶಾಲಾ ಶಿಕ್ಷಕರ ಸಿಬ್ಬಂದಿ ಹಾಗೂ ಮಕ್ಕಳ ಉಪಸ್ಥಿತರಿದ್ದರು. ಶಿಕ್ಷಕಿ ಎನ್‌. ಬಿ. ರೇವಪ್ಪನವರ ಕಾರ್ಯಕ್ರಮ ನಿರೂಪಿಸಿದರು, ವಿಠ್ಠಲ ದಳವಾಯಿ ಸ್ವಾಗತಿಸಿದರು, ಬಿ. ಎಂ. ಬಾವಾಖಾನ್ ಪ್ರಾರ್ಥನೆ ನೆರವೇರಿಸಿದರು.