ಬಳ್ಳಾರಿ: ಉತ್ತಮ ಹತ್ತಿ ಬೆಳೆ: ಕ್ಷೇತ್ರೋತ್ಸವ
ಲೋಕದರ್ಶನ ವರದಿ
ಬಳ್ಳಾರಿ 15: ಗೋವಿಂದವಾಡ ಗ್ರಾಮದ ಪ್ರಗತಿಪರ ರೈತನಾದ ನಾಗರಾಜ್ ರವರ ಹೊದಲ್ಲಿ ಹತ್ತಿ ಬೆಳೆ ಕ್ಷೇತ್ರೋತ್ಸವ ನಡೆಯಿತು. ರಾಶಿ ಸೀಡ್ಸ್ ಕಂಪನಿಯ ಪ್ರಾದೇಶಿಕ ಅಧಿಕಾರಿ ಎಂ.ಉದಯಕುಮಾರ್ ಮತ್ತು ಪ್ರಭುಶಂಕರ ರವರು ಮಾತನಾಡಿ ರಾಶಿ ಸೀಡ್ಸ್ ಆರ್.ಸಿ.ಹೆಚ್. 659 ಹತ್ತಿಯ ತಳಿ 130 ರಿಂದ 140 ದಿನಗಳ ಅವಧಿಯಲ್ಲಿ ಪಸಲು ನೀಡುತ್ತದೆ. ಇದು ಒಣ ಬೇಸಾಯ ಮತ್ತು ನೀರಾವರಿ ಕ್ಷೇತ್ರ ಎರಡರಲ್ಲೂ ಸುಲಭವಾಗಿ ಬೆಳೆಯಬಹುದು ಎಂದು ಮನವರಿಕೆ ಮಾಡಿದರು.
ಒಂದು ಗಿಡದಲ್ಲಿ 80 ರಿಂದ 100 ಕಾಯಿಗಳು ಬಿಡುತ್ತವೆ. ಪ್ರತಿ ಕಾಯಿಯ ತೂಕ ಏಳರಿಂದ 8 ಗ್ರಾಂವರೆಗೆ ತೂಗುತ್ತದೆ. ವರ್ಷದಲ್ಲಿ 2 ಮಿಶ್ರ ಬೆಳೆಯಾಗಿ ಪಡೆಯುವ ಅವಕಾಶ ಇರುವ ಈ ಬೆಳೆಯನ್ನು ಬೆಳೆದು ರೈತರು ಇದರ ಪ್ರಯೋಜನೆ ಪಡೆದುಕೊಳ್ಳಬಹುದು ಎಂದು ಹೇಳಿದರು. ದೊಡ್ಡ ಕಾಯಿ ರಸ ಹೀರುವ ಕೀಟಗಳಿಂದ ರುಕ್ಷೆ ಶೀಗ್ರ ಮರು ಚಿಗುರು ಮಧ್ಯಮ ಅವಧಿ ಬೆಳೆಯಾಗಿದೆ ಎಂದು ರಾಶಿ ಸೀಡ್ಸ್ ಮಹತ್ವವನ್ನು ವಿವರಿಸಿದರು. ರಾಶಿ ಸೀಡ್ಸ್ ಕಂಪನಿಯ ಧನರಾಜ್.ಎಲ್ ತಿಪ್ಪೇಸ್ವಾಮಿ ರೈತರಾದ ನಾಗರಾಜ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 