ಅಂತರರಾಜ್ಯ ಡಿಜೈಲ್ ಆರೋಪಿ ಬಂಧನ
ಲೋಕದರ್ಶನ ವರದಿ
ಬೈಲಹೊಂಗಲ: ಅಂತರರಾಜ್ಯ ಡಿಜೈಲ್ ಕಳ್ಳನನ್ನು ಬಂಧಿಸಿ 5,79,000 ರೂ.ನಗದು ಹಾಗೂ 4,50,000 ರೂ.ಮೌಲ್ಯದ ಲಾರಿ ಮತ್ತು ಡಿಜೈಲ್ ಕಳ್ಳತನಕ್ಕೆ ಬಳಸಿದ ಸಾಮಗ್ರಿಗಳನ್ನು ನೇಸರಗಿ ಪೊಲೀಸರು ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ನೇಸರಗಿ, ಯರಗಟ್ಟಿ ಹೆದ್ದಾರಿ ರಸ್ತೆಯ ಸೋಮನಟ್ಟಿ ಗ್ರಾಮದ ಹತ್ತಿರ ಶುಕ್ರವಾರ ನಡೆದಿದೆ.
ಮಹಾರಾಷ್ಟ್ರ ಮೂಲದ ಉಸ್ಮಾನಾಬಾದ ಜಿಲ್ಲೆಯ ವಾಸಿ ತಾಲ್ಲೂಕಿನ ಅಶೋಕ ಗೋಪಿನಾಥ ಕಾಳೆ (36) ಬಂಧಿತ ಆರೋಪಿ. ಈತ ತನ್ನ ಸಹಚರರೊಂದಿಗೆ ಸೇರಿ ಬೆಳಗಾವಿ ಜಿಲ್ಲೆಯ ನೇಸರಗಿ, ಕಟಕೋಳ, ರಾಮದುರ್ಗ, ನಂದಗಡ ಪೊಲೀಸ್ ಠಾಣೆೆಗಳ ಹದ್ದಿಗಳಲ್ಲಿ ಸುಮಾರು 12,008 ಲೀಟರ್ ಡಿಜೈಲ್ ಕಳ್ಳತನ ಮಾಡಿದ್ದಾನೆ.
ವಿಶೇಷ ತನಿಖಾ ತಂಡದ ಅಧಿಕಾರಿ ವ್ಹಿ.ಟಿ.ದೊಡಮನಿ, ಸಿಪಿಐ ಎಂ.ಎಸ್.ಕುಸುಗಲ್ಲ, ನೇಸರಗಿ ಪಿಎಸ್ಐ ಆರ್.ಎಸ್.ಜಾನರ, ಎಎಸ್ಐ ಎ.ಜಿ.ಸಾಲಿ, ಎಎಸ್ಐ ಆರ್.ಆರ್.ಕಂಗನೊಳ್ಳಿ, ಎಸ್.ಎಂ.ಮಂಗನ್ನವರ, ಸಿಬ್ಬಂದಿಗಳಾದ ಎನ್.ವಿ.ಪರಡ್ಡಿ, ಯು.ಎಚ್.ಪೂಜೇರ, ಎಸ್.ಎಚ್.ಹಾದಿಮನಿ, ಕೆ.ಡಿ.ಕುಳ್ಳೂರ, ಎಂ.ಎಸ್.ನಂದಿ ಈತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಜೈಲ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನ ಆರೋಪಿಗಳ ಬಂಧನಕ್ಕೆ ಜಾಲ ಬಿಸಲಾಗಿದೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 