ಶ್ರೇಷ್ಠ ಇಂಟರ್ ನ್ಯಾಷನಲ್ ಸ್ಕೂಲ್ವಿಕಲಚೇತನರಿಗೆ ಉಚಿತ, ತಂದೆ ಇಲ್ಲದ ಮಕ್ಕಳಿಗೆ ಅರ್ಧ ಫೀ
Shrestha International School: Free for the disabled, half fee for fatherless children
ಬಳ್ಳಾರಿ 12 : ಸಿರಿವಾರ ಕ್ರಾಸ್ ಬಳಿ ಮಾತೃಭೂಮಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ ವತಿಯಿಂದ ಶ್ರೇಷ್ಠ ಇಂಟರ್ ನ್ಯಾಷನಲ್ ಶಾಲೆ, ವಿಕಲಚೇತನ ಮಕ್ಕಳಿಗೆ ಉಚಿತ,ವಿದ್ಯಾಭಾಸ ಹಾಗೂ ತಂದೆ ಇಲ್ಲದ ಮಕ್ಕಳಿಗೆ ಶೇ 50 ರಷ್ಟು, ರೈತರ ಮಕ್ಕಳಿಗೆ ಶೇ 10 ರಷ್ಟು ಫೀಜ್ ರಿಯಾಯತಿಯಲ್ಲಿ ಮೌಲ್ಯವರ್ಧಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣ ನೀಡಲಿದೆ ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಹ್ಮಯ್ಯ ನಾಯ್ಡು ತಿಳಿಸಿದ್ದಾರೆ.
ಅವರು ಇಂದು ನಗರದ ಪೋಲೋ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಇಂಟಿಗ್ರೇಟೆಡ್ ಸ್ಪೋರ್ಟ್ಸ ಅಕಾಡೆಮಿ ಟೆನ್ ವಿಕ್ ಸಂಸ್ಥೆ ಮತ್ತು ಶಿಕ್ಷಣ ತಜ್ಞ ಗುರುರಾಜ ಕರ್ಜಿಗಿ ಅವರ ಅಕಾಡೆಮಿ ಫರ್ ಕ್ರಿಯೇಟಿವ್ ಟೀಚಿಂಗ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಿ ಬಿ ಎಸ್ ಇ ಪಠ್ಯದೊಂದಿಗೆ ಶಾಲೆ ಆರಂಭಿಸಿದೆ.ಶಾಲೆಯು 8 ಎಕರೆ ಆವರಣದಲ್ಲಿ ಆರಂಭಗೊಂಡಿದ್ದು ಪಕ್ಕದ 12 ಎಕರೆಯನ್ನು ಸಹ ಭೋಗಕ್ಕೆ ಪಡೆದಿದೆ.
ಇಲ್ಲಿ ಶಿಕ್ಷಣದ ಜೊತೆಗೆ ವಿಶೇಷವಾಗಿ ಕ್ರೀಡೆಗೆ ಸಹ ಹೆಚ್ಚಿನ ಒತ್ತು ನೀಡುತ್ತಿದೆ. ಅನಿಲ್ ಕುಂಬ್ಳೆ ಅವರ ಸಂಸ್ಥೆಯಿಂದ ಕ್ರಿಕೆಟ್, ಈಜು, ಫುಟ್ ಬಾಲ್, ಬ್ಯಾಡ್ ಮಿಂಟನ್, ಕುದರೆ ಸವಾರಿ ಮೊದಲಾದ ಕ್ರೀಡೆಗಳನ್ನು ತರಬೇತಿ ನೀಡಲಿದ್ದಾರೆ. ತಮಿಳುನಾಡಿನ ತಂಜಾವೂರಿನ ಸಂಸ್ಥೆಯಿಂದ ಪಾರಂಪರಿಕ ಅತ್ಮ ರಕ್ಷಣೆಯ ಕಲೆಗಳನ್ನು ಕಲಿಸಲಿದೆ. ಮುಖ್ಯವಾಗಿ ಮಕ್ಕಳಿಗೆ ಒತ್ತಡ ರಹಿತ ಶಿಕ್ಷಣ ನೀಡುವುದಾಗಿದೆ.
ಶಾಲೆಯಲ್ಲಿನ ಮಕ್ಕಳಿಗೆ ನಮ್ಮ ಸಂಸ್ಥೆಯ 35 ಎಕರೆ ಪ್ರದೇಶದಲ್ಲಿ ಬೆಳೆಯುವ ಸಾವಯವ ತರಕಾರಿ, ಹಣ್ಣು, ಧಾನ್ಯಗಳಿಂದಲೇ ಊಟದ ವ್ಯವಸ್ಥೆ ಮಾಡಲಿದೆಂದು ತಿಳಿಸಿದರು. ಶಾಲೆಯ ಪ್ರವೇಶಕ್ಕೆ ಪೋಷಕರು ಶಿಕ್ಷಣ ಪಡೆದಿರಬೇಕು ಎಂಬ ಯಾವುದೇ ನಿಯಮ ಇಲ್ಲ ಎಂದರು.ಈ ತಿಂಗಳ 14ರಂದು ಶಾಲೆಯ ಮೊದಲನೇ ವಾರ್ಷಿಕೋತ್ಸವ ಸಂಜೆ 5 ಕ್ಕೆ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದು. ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಿಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಬ್ರಹ್ಮಯ್ಯ ನಾಯ್ಡು ತಿಳಿಸಿದರು. ಈ ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಸುನೀಲ್ ಕುಮಾರ್ ಮತ್ತು ವಿವೇಕ್ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 