ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡು ಕಾಣೆಯಾದ 369 ರೋಹಿಂಗ್ಯ ಮುಸ್ಲಿಮರ ಪತ್ತೆಗೆ ಶೋಧ
ಲಕ್ನೋ,
ಏಪ್ರಿಲ್ 19, ಮಾರ್ಚ್ ಮಧ್ಯದಲ್ಲಿ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ
ಜಮಾಅತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ 369 ರೋಹಿಂಗ್ಯಾ ಮುಸ್ಲಿಮರನ್ನು
ಪತ್ತೆಹಚ್ಚಲು ಉತ್ತರ ಪ್ರದೇಶ ಪೊಲೀಸರು ಎಂಟು ಜಿಲ್ಲೆಗಳಲ್ಲಿ ಲುಕ್ಔಟ್ ನೋಟಿಸ್ ಜಾರಿ
ಮಾಡಿದ್ದಾರೆ.ಅಲಿಘಡ, ಮಥುರಾ, ಕಾನ್ಪುರ್, ಮೀರತ್, ಮುಜಫ್ಫರ್ನಗರ, ಸಹರಾನ್ಪುರ,
ಫಿರೋಜಾಬಾದ್ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಗಳಿಗೆ ರಾಜ್ಯ ಡಿಜಿಪಿ ಕಚೇರಿಯಿಂದ
ಶನಿವಾರ ಎಸ್ಒಎಸ್ ಕಳುಹಿಸಲಾಗಿದೆ ಈ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರು ಭಾನುವಾರ ಸಂಜೆ
ವೇಳೆಗೆ ಈ ಕಾಣೆಯಾದ ರೋಹಿಂಗ್ಯಾಗಳ ಬಗ್ಗೆ ತಮ್ಮ ಶೋಧ ಕಾರ್ಯಗಳ ಬಗ್ಗೆ ವರದಿಗಳನ್ನು
ಕಳುಹಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ತಿಂಗಳು ಸಭೆಗೆ
ಹಾಜರಾದ ನಂತರ ರಾಜ್ಯಕ್ಕೆ ಮರಳಿದವರಲ್ಲಿ 2,812 ಜನರನ್ನು ಯುಪಿ ಪೊಲೀಸರು
ಗುರುತಿಸಿದ್ದಾರೆ. ಗುರುತಿಸಲ್ಪಟ್ಟವರಲ್ಲಿ, 2,539 ಮಂದಿಯನ್ನು
ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ವರದಿಯಾಗಿದೆ.ಕಳೆದ ತಿಂಗಳು ರಾಷ್ಟ್ರ ರಾಜಧಾನಿಯ
ಕಾರ್ಯಕ್ರಮಕ್ಕೆ ಭೇಟಿ ನೀಡಿದ 325 ವಿದೇಶಿಯರಲ್ಲಿ 45 ಜನರ ವಿರುದ್ಧ ಎಫ್ಐಆರ್
ದಾಖಲಿಸಲಾಗಿದ್ದು, 259 ಪಾಸ್ಪೋರ್ಟ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು
ತಿಳಿಸಿದ್ದಾರೆ.
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ 