ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡು ಕಾಣೆಯಾದ 369 ರೋಹಿಂಗ್ಯ ಮುಸ್ಲಿಮರ ಪತ್ತೆಗೆ ಶೋಧ
ಲಕ್ನೋ,
ಏಪ್ರಿಲ್ 19, ಮಾರ್ಚ್ ಮಧ್ಯದಲ್ಲಿ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ
ಜಮಾಅತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ 369 ರೋಹಿಂಗ್ಯಾ ಮುಸ್ಲಿಮರನ್ನು
ಪತ್ತೆಹಚ್ಚಲು ಉತ್ತರ ಪ್ರದೇಶ ಪೊಲೀಸರು ಎಂಟು ಜಿಲ್ಲೆಗಳಲ್ಲಿ ಲುಕ್ಔಟ್ ನೋಟಿಸ್ ಜಾರಿ
ಮಾಡಿದ್ದಾರೆ.ಅಲಿಘಡ, ಮಥುರಾ, ಕಾನ್ಪುರ್, ಮೀರತ್, ಮುಜಫ್ಫರ್ನಗರ, ಸಹರಾನ್ಪುರ,
ಫಿರೋಜಾಬಾದ್ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಗಳಿಗೆ ರಾಜ್ಯ ಡಿಜಿಪಿ ಕಚೇರಿಯಿಂದ
ಶನಿವಾರ ಎಸ್ಒಎಸ್ ಕಳುಹಿಸಲಾಗಿದೆ ಈ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರು ಭಾನುವಾರ ಸಂಜೆ
ವೇಳೆಗೆ ಈ ಕಾಣೆಯಾದ ರೋಹಿಂಗ್ಯಾಗಳ ಬಗ್ಗೆ ತಮ್ಮ ಶೋಧ ಕಾರ್ಯಗಳ ಬಗ್ಗೆ ವರದಿಗಳನ್ನು
ಕಳುಹಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ತಿಂಗಳು ಸಭೆಗೆ
ಹಾಜರಾದ ನಂತರ ರಾಜ್ಯಕ್ಕೆ ಮರಳಿದವರಲ್ಲಿ 2,812 ಜನರನ್ನು ಯುಪಿ ಪೊಲೀಸರು
ಗುರುತಿಸಿದ್ದಾರೆ. ಗುರುತಿಸಲ್ಪಟ್ಟವರಲ್ಲಿ, 2,539 ಮಂದಿಯನ್ನು
ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ವರದಿಯಾಗಿದೆ.ಕಳೆದ ತಿಂಗಳು ರಾಷ್ಟ್ರ ರಾಜಧಾನಿಯ
ಕಾರ್ಯಕ್ರಮಕ್ಕೆ ಭೇಟಿ ನೀಡಿದ 325 ವಿದೇಶಿಯರಲ್ಲಿ 45 ಜನರ ವಿರುದ್ಧ ಎಫ್ಐಆರ್
ದಾಖಲಿಸಲಾಗಿದ್ದು, 259 ಪಾಸ್ಪೋರ್ಟ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು
ತಿಳಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 