ಲೋಕದರ್ಶನ ವರದಿ
ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ತರಬೇತಿ ಪ್ರಾರಂಭ
ಹುಕ್ಕೇರಿ 28: ಕಸವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಂಗಡಿಸಿ ನಿರ್ವಹಣೆ ಮಾಡುವದು ಇಂದಿನ ಅವಶ್ಯಕತೆ ಆಗಿದೆ. ಮೂಲದಲ್ಲಿಯೇ ತ್ಯಾಜ್ಯವನ್ನು ಬೆರಿ್ಡಸುವದು ಪರಿಸರ ಸಂರಕ್ಷಣೆಗೆ ಮೂಲಾಧಾರ ಎಂದು ಬೆಂಗಳೂರ ಎಂ.ಜಿ.ಆಯ್.ಆರ್.ಇ.ಡಿ, ವೀಕ್ಷಕ ವಿಕ್ರಮ ಕುಲಕರ್ಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಎಂ.ಜಿ. ಆಯ್.ಆರ್.ಇ.ಡಿ. ಬೆಂಗಳೂರ, ಜಿಲ್ಲಾ ಪಂಚಾಯತ ಬೆಳಗಾವಿ, ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಅವರುಗಳ ಸಂಯುಕ್ತ ಆಶ್ರಯದಲ್ಲಿ ಹುಕ್ಕೇರಿ ತಾಲೂಕಿನ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯೆರುಗಳಿಗೆ 3 ದಿನಗಳ ಪುನಶ್ಚೇತನ ತರಬೇತಿಯನ್ನು ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರ, ಮಚ್ಛೆಯಲ್ಲಿ ತರಬೇತಿಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿದಾರ ಸಿದ್ದಪ್ಪ ಹಿತ್ತಲಮನಿ ಸ್ವಾಗತಿಸಿ, ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿ ಮಾ. ಮ. ಗಡಗಲಿ, ಪ್ರಾಸ್ತಾವಿಕವಾಗಿ ಮಾತನಾಡಿದರು.