ಕೊಟ್ಟೂರು: ಸಿಕ್ಕವು ಭಕ್ತರು ಬರೆದ ಚೀಟಿಗಳು: ಕಳೆದ ಆರು ತಿಂಗಳಲ್ಲಿ 39 ಲಕ್ಷ ರೂ. ಸಂಗ್ರಹ
ಲೋಕದರ್ಶನ ವರದಿ
ಕೊಟ್ಟೂರು 20: ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಗುರುವಾರ ಹಣ ಎಣಿಕೆ ನಡೆಯಿತು. ಹುಂಡಿಯಲ್ಲಿ ಹಣದೊಂದಿಗೆ ಕಷ್ಟಗಳನ್ನು ದೂರು ಮಾಡುವುದು ಹಾಗೂ ನೌಕರಿ, ಆರೋಗ್ಯ ಕಾಪಾಡುವಂತೆ ಭಕ್ತರು ಬರೆದ ಚೀಟಿಗಳೂ ದೊರೆತಿವೆ.
ದೇವಸ್ಥಾನ ಪ್ರಧಾನ ಧರ್ಮಕರ್ತ ಗಂಗಾಧರಯ್ಯ, ತಹಸೀಲ್ದಾರ್ ಅನಿಲ್ ಕುಮಾರ್ ಹಾಗೂ ಕಟ್ಟಿಮನಿ ದೈವದವರ ಸಮ್ಮುಖದಲ್ಲಿ ನಡೆದ ಹುಂಡಿ ಎಣಿಕೆ ನಡೆದಿದ್ದು, 39,29,704 ರೂ. ಸಂಗ್ರಹವಾಗಿದೆ. ಕಳೆದ ಆರು ತಿಂಗಳಿನ ಕಾಣಿಕೆ ಇದಾಗಿದ್ದು, ರಥೋತ್ಸವದ ನಂತರ ಹುಂಡಿಯಲ್ಲಿ 34,20 ಲಕ್ಷ ರೂ. ಸಂಗ್ರಹವಾಗಿತ್ತು. ಆರು ತಿಂಗಳಲ್ಲಿ ಆರು ಲಕ್ಷ ರೂ. ಹೆಚ್ಚಳವಾಗಿದೆ ಎಂದು ಧಾಮರ್ಿಕ ದತ್ತಿ ಇಲಾಖೆ ಕಾರ್ಯನಿವರ್ಾಹಕ ಅಧಿಕಾರಿ ಪ್ರಕಾಶ್ ರಾವ್ ತಿಳಿಸಿದ್ದಾರೆ.
ದೇವಸ್ಥಾನದ ಧರ್ಮಕರ್ತ ಗಂಗಾಧರಯ್ಯ ಮಾತನಾಡಿ, ದೇವಸ್ಥಾನದಲ್ಲಿ 3 ಕೋಟಿ ರೂ.ಠೇವಣಿ ಇದೆ. 1 ಕೋಟಿ ರೂ. ದೇವಸ್ಥಾನದ ಖಾತೆಯಲ್ಲಿವಿದ್ದು, ಈ ಹಣದಿಂದ ಬೆಳ್ಳಿಬಾಗಿಲು ನಿಮರ್ಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕೆಂಪಳ್ಳಿ ಗುರುಸಿದ್ದನಗೌಡ, ಎಂ.ನಾಗರಾಜ್, ದೇವರ ಮನಿ ಕರಿಯಪ್ಪ ಹಾಗೂ ಕನರ್ಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ)ಮ್ಯಾನೇಜರ್ ಸಿದ್ದಲಿಂಗನ ಗೌಡ ಇತರರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 