ದುಡಿಮೆಗೆ ಉದ್ಯೋಗ ಖಾತ್ರಿ ಯೋಜನೆ ಸಾಕಷ್ಟು ನೆರವಾಗುತ್ತಿದೆ: ಸಿ.ಆರ್ ಮುಂಡರಗಿ
ಗದಗ 25: ಕೂಲಿ ಕಾರ್ಮಿಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲ ಸಂರಕ್ಷಣೆ, ಮಣ್ಣು ಮತ್ತು ನೀರು ಸಂರಕ್ಷಣೆ, ಜಲ ಮೂಲಗಳ ಸಂರಕ್ಷಣೆ ಜತೆಗೆ ದುಡಿಮೆಗೆ ಉದ್ಯೋಗ ಖಾತ್ರಿ ಯೋಜನೆ ಸಾಕಷ್ಟು ನೆರವಾಗುತ್ತಿದೆ ಎಂದು ಜಿಪಂ ಸಹಾಯ ನಿರ್ದೇಶಕರಾದ ಸಿ.ಆರ್ ಮುಂಡರಗಿ ಅವರು ಹೇಳಿದರು. ಶುಕ್ರವಾರ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಬದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆರಂಭವಾಗಿರುವ ಕಂದಕ ಬದು ನಿರ್ಮಾಣದಲ್ಲಿ ಪ್ರತಿದಿನ 70 ಸಾವಿರಕ್ಕೂ ಹಚ್ಚು ಜನ ಭಾಗಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ಮಾಣವು ಉದ್ಯೊಗ ಖಾತ್ರಿ ಯೋಜನೆಯ ಮುಖ್ಯ ಉದ್ದೆಶವಾಗಿದೆ. ಕೂಲಿ ಪಾವತಿಯಲ್ಲಿ ಗಂಡು- ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ, ಪ್ರತಿ ದಿನಕ್ಕೆ 370 ರೂ. ಕೂಲಿ ಸರಕಾರ ನಿಗದಿ ಪಡಿಸಿದೆ. ನರೇಗಾ ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ, ಆರೋಗ್ಯ ತಪಾಸಣೆ ಶಿಬಿರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಡಲಾಗಿದೆ. ಚಿಕ್ಕ ಮಕ್ಕಳ ನೋಡಿಕೊಳ್ಳಲು ಕೂಸಿನ ಮನೆ ತೆರೆಯಲಾಗಿದೆ. ಗ್ರಾಮಸ್ಥರು ಇದರ ಸದಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕುರ್ತಕೋಟಿ ಗ್ರಾಮದಲ್ಲಿ ಕಂದಕ ಬದುಗಳು ಮಾದರಿಯಾಗಿವೆ. ಕೂಲಿಕಾರರು ತಮ್ಮಗೆ ತಿಳಿಸಿದಂತೆ ಕಂದಕಗಳನ್ನು ರಚಿಸಿದ್ದಾರೆ. ಇದೆ ರೀತಿ ಕೆಲಸವನ್ನ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ ಅವರು ಮಾತನಾಡಿ, ಪ್ರತಿ ವರ್ಷ ಏಪ್ರಿಲ್ ಮೊದಲ ವರದಿಂದಲೇ ಗ್ರಾಮದ ಜನರಿಗೆ ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿ ಆರಂಭಿಸುವ ರೂಢಿ ಇದೆ. ಗ್ರಾಮದ ಪ್ರತಿ ಕುಟುಂಬದವರಿಗೂ ಇದು ಅನಕೂಲವಾಗಿದೆ. ಸರಕಾರ ಪಾರ್ದಶಕ ಆಡಳಿತಕ್ಕಾಗಿ ಹಲವು ಹೊಸ ಹೊಸ ಉಪ ಕ್ರಮಗಳನ್ನು ಜಾರಿಗೊಳಿಸುತ್ತುದ್ದು, ನಾವು ನೀವೆಲ್ಲ ಅವುಗಳನ್ನು ಪಾಲಿಸಿಕೊಂಡು ಮುಂದುವರೆಯಬೇಕು. ಕಂದಕ ಬದು ನಿರ್ಮಾಣ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ಜಮೀನಿನಲ್ಲಿಯ ಮಣ್ಣು ಮಳೆಗೆ ಕೊಚ್ಚಿ ಹೋಗದಂತೆ ತಡೆದು ಜಮೀನಿನಲ್ಲಿಯೇ ಇಂಗುವಂತೆ ಮಾಡಲಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಫಸಲು ಉತ್ತಮವಾಗಲಿದೆ ಎಂದರು.ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಕುಮಾರ ಪೂಜಾರ ಅವರು ಮಾತನಾಡಿ, ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿಗಳ ಹಾಜರಾತಿ ಕಡ್ಡಾಯವಾಗಿ ಎನ್ಎಂಎಂಎಸ್ ತಂತ್ರಾಂಶದಲ್ಲಿ ಪ್ರತಿದಿನ ಎರಡು ಅಳವಡಿಸಬೇಕು. ಗ್ರಾಮೀಣ ಪ್ರದೇಶದ ಬಡ ಅಕುಶಲ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ ಎಂದರು. ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೊತೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಅಶೋಕ ಶಿರಹಟ್ಟಿ, ಮುತ್ತಣ್ಣ ಸುಕಂದ, ವೀರಣ್ಣ ಕೋರಿ, ಯಲ್ಲಪ್ಪ ಬೇವಿನಮರದ, ಬಕ್ಷಿ ತಹಶೀಲ್ದಾರ, ಗ್ರಾಪಂ ಎಸ್ಡಿಎ ಈರ್ಪ ಪೂಜಾರ, ಜಿಲ್ಲಾ ಐಇಸಿ ಸಂಯೋಜಕ ವೀರಭದ್ರ್ಪ ಸಜ್ಜನ, ತಾಲೂಕು ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಬಿಎಫ್ಟಿ ಸೋಮಶೇಖರ ತರಬಿನ್, ಡಿಇಒ ಶಿವಾನಂದ ಹುಬ್ಬಳ್ಳಿ, ಮೌಲಾಸಾಬ್ ಚಲ್ಲಮರದ, ಜಿಕೆಎಂ ಜಿ.ಐ. ಕಲ್ಗುಡಿ, ಕಾಯಕ ಬಂಧುಗಳು ಇತರರಿದ್ದರು. ಬಾಕ್ಸ್ ಸಹಬಾಳ್ವೆ ಹೆಚ್ಚಳ*ಬೆಳಗ್ಗೆ 6 ಗಂಟೆ ಒಳಗಾಗಿ ಬುತ್ತಿಯೊಂದಿಗೆ ಕೆಲಸಕ್ಕೆ ಹಾಜರಾಗುತ್ತವೆ. ಅಳತೆಗೆ ಅನುಸಾರ ಕೆಲಸ ಮಾಡಿದ ನಂತರ ಬುತ್ತಿಯನ್ನು ಬಿಚ್ಚಿ ಪರಸ್ಪರ ಹಂಚಿಕೊಂಡು ಊಟ ಮಾಡುತ್ತವೆ. ದಿನಕ್ಕೆ 370 ಕೂಲಿ ದೊರೆಯಲಿದೆ. ಕೆಲವೊಮ್ಮೆ ಜಮೀನಿನ ಮಾಲೀಕರು ಉಪಾಹಾರದ ವ್ಯವಸ್ಥೆ ಮಾಡುತ್ತಾರೆ. ಒಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮಸ್ಥರಲ್ಲಿ ಹೊಂದಾಣಿಕೆ, ಸಹಬಾಳ್ವೆ ಹೆಚ್ಚುವಂತೆ ಮಾಡಿದೆ.