ಸಾವರ್ಕರ್‌ ಕುರಿತು ರಾಹುಲ್‌ ಹೇಳಿಕೆಗೆ ಸುಪ್ರೀಂ ಛೀಮಾರಿ

Supreme Court reprimands Rahul for his statement on Savarkar

ನವದೆಹಲಿ 25: ಸ್ವಾತಂತ್ರ್ಯ ಹೋರಾಟಗಾರ ವೀರ್ಸಾವರ್ಕರ್ಅವರ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಮುಖಂಡ ರಾಹುಲ್ಗಾಂಧಿಗೆ ಸುಪ್ರೀಂಕೋರ್ಟ್ಶುಕ್ರವಾರ (.25) ಛೀಮಾರಿ ಹಾಕಿದ್ದು, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಇಂತಹ ಹೇಳಿಕೆ ನೀಡಲು ಅವಕಾಶ ನೀಡುವುದಿಲ್ಲ ಎಂದಿರುವ ಸುಪ್ರೀಂ ಒಂದು ವೇಳೆ ಮತ್ತೆ ಪುನರಾವರ್ತನೆಯಾದರೆ ಸ್ವಯಂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

2022 ನವೆಂಬರ್‌ 17ರಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಭಾರತ್ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ಗಾಂಧಿ ಸಾವರ್ಕರ್ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು. ಸಾವರ್ಕರ್ಅವರು ಬ್ರಿಟಿಷ್ಸೇವಕರಾಗಿದ್ದು, ವಸಾಹತುಶಾಹಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ರಾಹುಲ್ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು.

ಸಾವರ್ಕರ್ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನಗೆ ನೀಡಿದ್ದ ಸಮನ್ಸ್ಅನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್ಹೈಕೋರ್ಟ್ನಿರಾಕರಿಸಿರುವುದನ್ನು ಪ್ರಶ್ನಿಸಿ ರಾಹುಲ್ಗಾಂಧಿ ಸುಪ್ರೀಂಕೋರ್ಟ್ಮೆಟ್ಟಿಲೇರಿದ್ದರು.

ಸುಪ್ರೀಂಕೋರ್ಟ್ಪೀಠದ ಜಸ್ಟೀಸ್ದೀಪಂಕರ್ದತ್ತ ಮತ್ತು ಜಸ್ಟೀಸ್ಮನ್ಮೋಹನ್ಅವರು ರಾಹುಲ್ಗಾಂಧಿ ಅರ್ಜಿಯ ವಿಚಾರಣೆ ನಡೆಸಿದ್ದರು. ತಮ್ಮ ಕಕ್ಷಿದಾರರಿಗೆ ಹೇಳಿಕೆಯ ಮೂಲಕ ದ್ವೇಷವನ್ನು ಪ್ರಚೋದಿಸುವ ಯಾವ ಉದ್ದೇಶ ಹೊಂದಿರಲಿಲ್ಲ ಎಂದು ಗಾಂಧಿ ಪರ ವಕೀಲರು ವಾದ ಮಂಡಿಸಿದ್ದರು.

ನಿಮ್ಮ ಕಕ್ಷಿದಾರರಿಗೆ ಅವರ ಅಜ್ಜಿ ಸಾವರ್ಕರ್ಗೆ ಪತ್ರವನ್ನು ಕಳುಹಿಸಿರುವ ವಿಚಾರದ ಬಗ್ಗೆ ಗೊತ್ತಾ?” ಎಂದು ಸುಪ್ರೀಂ ತರಾಟೆಗೆ ತೆಗೆದುಕೊಂಡಿತ್ತು.

ಏತನ್ಮಧ್ಯೆ ಸುಪ್ರೀಂಕೋರ್ಟ್ಸಂಸದ ರಾಹುಲ್ಗೆ ಕಠಿಣ ಎಚ್ಚರಿಕೆ ನೀಡಿದ್ದು, ನೀವೊಬ್ಬರು ರಾಜಕೀಯ ವ್ಯಕ್ತಿ. ಒಂದು ವೇಳೆ ಪ್ರಚೋದಿಸುವುದು ನಿಮ್ಮ ಉದ್ದೇಶ ಅಲ್ಲ ಎಂದಾದರೆ, ಇಂತಹ ಹೇಳಿಕೆ ಯಾಕೆ ನೀಡುತ್ತೀರಿ? ಎಂದು ಪ್ರಶ್ನಿಸಿದೆ.

ಆದರೆ ಸಮನ್ಸ್ಪ್ರಕ್ರಿಯೆಗೆ ಈಗ ತಡೆ ನೀಡಲು ಒಪ್ಪಿರುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್‌, ಇನ್ಮುಂದೆ ಯಾವುದೇ ಕಾರಣಕ್ಕೂ ಇಂತಹ ಹೇಳಿಕೆಯನ್ನು ನೀಡಬಾರದು ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ಅಂತಹ ಹೇಳಿಕೆಯ ಪುನರಾವರ್ತನೆಯಾದರೆ ಸ್ವಯಂ ಆಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.