ಬಳ್ಳಾರಿ: ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ
ಲೋಕದರ್ಶನ ವರದಿ
ಬಳ್ಳಾರಿ 10: ದಸರಾ ಮಹೋತ್ಸವದ ನಿಮಿತ್ತ ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮುಖಂಡ ಅಂದಾಜು 500 ಹೆಲ್ಮೆಟ್ಗಳನ್ನು ವಿತರಿಸಿ, ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ, ರಸ್ತೆ ಸುರಕ್ಷ ಅಭಿಯಾನ ಮಾಡಿದರು.
ಟ್ರಸ್ಟ್ನ ಅಧ್ಯಕ್ಷ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ದಸರಾ ಹಾಗೂ ನವರಾತ್ರಿಯಲ್ಲಿ ನಮ್ಮ ಕುಟುಂಬಕ್ಕೆ ಹಾಗೂ ಎಲ್ಲಾರಿಗೂ ಒಳ್ಳೆದಾಗಲಿ ಎಂದು 9 ದಿನಗಳ ಕಾಲ ನಾನಾ ರೀತಿಯಲ್ಲಿ ಪೂಜೆ, ಹೋಮ-ಹವನಗಳನ್ನು ಮಾಡುತ್ತೆವೆ. ಆದರೆ ರಸ್ತೆಯಲ್ಲಿ ಬೈಕ್ಗಳಲ್ಲಿ ಸಂಚಾರ ನಡೆಸುವಾಗ ಯಾವುದೇ ರೀತಿಯಲ್ಲಿ ಭದ್ರತೆಯನ್ನು ಮಾಡಿಕೊಳ್ಳದೇ ಸಂಚಾರ ಮಾಡುತ್ತೆವೆ. ಹೆಲ್ಮೆಟ್ ಇಲ್ಲದೇ ರಸ್ತೆ ಅಪಘಾತದಲ್ಲಿ ಸಾವು ನೋವು ಆಗ ಬಾರದು ಎಂದರೆ ಹೆಲ್ಮಟ್ ಬಳಿಸಬೇಕು. ಇಲ್ಲವೆಂದರೆ ನಮ್ಮ ಸಾವು ನಾವೆ ತಂದುಕೊಂಡತೆ. ನಮ್ಮ ರಕ್ಷಣೆ ಹಾಗೂ ಇತರೆ ಉಪಯುಕ್ತ ಆಯುದ್ಧಗಳನ್ನು ಆಯುದ್ಧ ಪುಜೆಯಲ್ಲಿ ಪುಜೆ ಮಾಡುತ್ತೆವೆ. ಆದ್ದರಿಂದ ಸಂಚಾರದಲ್ಲಿ ನಮ್ಮ ಪ್ರಾಣ ರಕ್ಷಣೆ ಮಾಡುವ ಹೆಲ್ಮೆಟ್ ಕೂಡ ಆಯುದ್ಧ ಇದ್ದಂತೆ. ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಳ್ಳಬೇಕು ಎಂದರು.
ನಗರದ, ಹೊಸಬಸ್ ನಿಲ್ದಾಣ, ಅನಂತಪುರ ರಸ್ತೆ ಸೇರಿ ನಾನಾ ಕಡೆ ಅಂದಾಜು500 ಹೆಲ್ಮೆಟ್ಗಳನ್ನು ಸಾರ್ವಜನಿಕರಿಗೆ ಹಾಗೂ ತನ್ನ ಸ್ನೇಹಿತರಿಗೆ ವಿತರಿಸಿದರು. ಟ್ರಸ್ಟ್ನ ಎಂ.ಜಯಸಿಂಹ, ಕುಮಾರ್ ಮತ್ತಿತರರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 