ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕೆಂದು ಆಶಾ ಕಾರ್ಯಕತರ್ೆಯರು ಬಿದಿಗಿಳಿದು ಪ್ರತಿಭಟನೆ
ಲೋಕದರ್ಶನ ವರದಿ
ಬೆಳಗಾವಿ 12 : ಬಾಕಿ ಇರುವ ಪ್ರೊತ್ಸಾಹಧನ ಬಿಡುಗಡೆ ಮಾಡಿ ಹಾಗೂ ಮಾಸಿಕ ವೇತನವನ್ನು ನಿರ್ಧರಿಸಿ ಎಂದು ಬೆಳಗಾವಿ ಜಿಲ್ಲಾ ಘಟಕದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘ ಬೃಹತ್ ಪ್ರತಿಭಟನೆ ನಡೆಸಿತು.
ಶುಕ್ರವಾರ ನಗರದಲ್ಲಿ ಆಶಾ ಕಾರ್ಯಕತರ್ೆಯರು ಆರೇಳು ತಿಂಗಳಾದರೂ ರಾಜ್ಯ ಸರಕಾರ ವೇತನ ನೀಡುತ್ತಿಲ್ಲ ಬಾಕಿ ಇರುವ ಪ್ರೊತ್ಸಾಹಧನವನ್ನು ಬಿಡುಗಡೆ ಮಾಡುತ್ತಿಲ್ಲ ವೇತನ ನೀಡದೆ ಆಶಾ ಕಾರ್ಯಕರ್ತಯರನ್ನು ಸರಕಾರ ದುಡಿಸಿಕೊಳ್ಳುತ್ತಿದೆ ಎಂದು ಆಶಾ ಕಾರ್ಯಕರ್ತಯರು ಬೃಹತ್ ಸಂಖ್ಯೆಯಲ್ಲಿ ಸೇರಿ ನಗರದ ಸರದಾರ ಮೈದಾನದಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆಶಾಕಾರ್ಯಕತರ್ೆಯರ ಸಂಘದ ಕಾರ್ಯದಶರ್ಿ ಡಿ.ನಾಗಲಕ್ಷ್ಮೀ ಮಾಥ್ಯಮಗಳೊಂದಿಗೆ ಮಾತನಾಡಿ ಸರಕಾರವು ವೇತನ ನೀಡದೆ ಕಾರ್ಯಕತರ್ೆಯರನ್ನು ದುಡಿಸಿಕೊಳ್ಳುತ್ತಿದೆ 3500ರೂಪಾಯಿ ಪ್ರೊತ್ಸಾಹ ಧನ ನೀಡುತ್ತೇನೆಂದು ಇದೀಗ ಕೇವಲ 1000 ರೂಪಾಯಿ ಮಾತ್ರ ನೀಡುತ್ತಿದೆ ಮಾಸಿಕ ಸಂಭಳವನ್ನು ಕೂಡ ನಿಧರ್ಿಷ್ಟ ಪಡಿಸಿಲ್ಲ ಆದಷ್ಟು ಬೇಗ ಪ್ರೊತ್ಸಾಹ ಧನ ನೀಡದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೆವೆ ಎಂದು ಎಚ್ಚರಿಕೆ ನೀಡಿದರು
ಆಶಾ ಕಾರ್ಯಕತರ್ೆ ಪಾರ್ವತಿ ತಿಗಡಿ ಮಾತನಾಡಿ ಸಾಕಷ್ಟು ಕೇಲಸ ನೀಡುತ್ತಾರೆ ಆದರೆ ಸಂಭಳ ನೀಡುವುದಿಲ್ಲ ಆಸ್ಪತ್ರೆಗಳಲ್ಲಿ ಗೌರವ ಕೊಡುತ್ತಿಲ್ಲ ತಾಯಿ ಮತ್ತು ಶಿಶು ಮರಣ ತಡೆಗಟ್ಟಲು ಕಾರ್ಯ ನಿರ್ವಹಿಸುತ್ತಿರುವ ನಮಗೆ ರಕ್ಷಣೆ ಇಲ್ಲ ಪತಿಯನ್ನು ಕಳೆದುಕೊಂಡವರು, ನಿರ್ಗತಿಕರು ಆಶಾಕಾರ್ಯಕತರ್ೆಯರಾಗಿ ಕಾರ್ಯ ನಿರ್ವಹಿಸುತ್ತಾರೆ ಅವರಿಗೆ ಸಂಬಳ ನೀಡದಿದ್ದರೆ ಜೀವನ ಸಾಗಿಸಲು ಹೇಗೆ ಸಾದ್ಯ ಎಂದರು
ಪ್ರತಿಭಟನೆಯಲ್ಲಿ ಮಹಾಂತೇಶ ಬಿಳ್ಳೂರ, ಲಕ್ಷ್ಮನ್ ಜಡ್ಡೆನ್ನವರ, ಗೀತಾ ರಾಯಗೊಳ ಸೇರಿದಂತೆ ಸಾವಿರಾರು ಕಾರ್ಯಕತರ್ೆಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 