ಹೊಂಡದಲ್ಲಿ ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಗದಗ 30: ನಗರದ ಗಂಗಾಪೂರಪೇಟೆಯಲ್ಲಿರುವ ಕೊನೇರಿ ಹೊಂಡದಲ್ಲಿ ರವಿವಾರ ಮಧ್ಯಾನ 3 ಗಂಟೆಗೆ ಮೀನುಗಳನ್ನು ಹಿಡಿಯಲು ಹೋಗಿದ್ದ ಮೂವರು ಬಾಲಕರಲ್ಲಿ ಪ್ರಥಮ ಮಾಡಳ್ಳಿ (09) ಎಂಬ ಬಾಲಕನು ಅಕಸ್ಮಿಕವಾಗಿ ಕಾಲುಜಾರಿ ಹೊಂಡಕ್ಕೆ ಬಿದ್ದಿದ್ದನು.  ಸುದ್ದಿ ತಿಳಿದು ಸ್ಥಳೀಯ ಯುವಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆವರೆಗೂ ಮಳೆಯಲ್ಲಿ ಕಾರ್ಯಾಚರಣೆ ನಡೆಸಿದರೂ  ಬಾಲಕ ಪತ್ತೆಯಾಗಿರಲಿಲ್ಲ  

ಸೋಮವಾರ  ಮತ್ತೆ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಳಿಗ್ಗೆ 8.30 ಗಂಟೆಗೆ ಬಾಲಕನ ಮೃತದೇಹವನ್ನು ಹೊಂಡದಿಂದ ಹೊರತೆಗೆದರು.  ಮೃತದೇಹವನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿದ್ದ ಎಲ್ಲರ ಕಣ್ಣುಗಳು ತುಂಬಿಕೊಂಡು ವಿಧಿಯನ್ನು ಶಪಿಸುತ್ತಿದ್ದರು.