ಮಾರಕಾಸ್ತ್ರ ಹಿಡಿದ 7ಜನರ ಗುಂಪು ಕಳ್ಳತನಕ್ಕೆ ಯತ್ನ: ಸಿಸಿ ಟಿವಿ ಕಣ್ಗಾವಲಿನಲ್ಲಿ ಸೆರೆ

ಜಮಖಂಡಿ  30: ನಗರದ ಪ್ರಭಾತ ಬಡಾವಣೆಯಲ್ಲಿ 7 ಜನರ ಕಳ್ಳರ ಗುಂಪು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಕಳತನಕ್ಕೆ ಯತ್ನ ನಡೆಸಿದ್ದು ಸಿಸಿ ಟಿವಿ ಕಣ್ಗಾವಲಿನಲ್ಲಿ ಸೆರೆಯಾದ ದೃಶ್ಯಗಳು ಇಲ್ಲಿನ ಜನತೆಯನ್ನು ನಿದ್ದೆ ಗೆಡಿಸಿ ಭಯದ ವಾತಾವರಣ ಸೃಷ್ಠಿಸಿದೆ. 

ಪ್ರಭಾತ ನಗರದಲ್ಲಿ ಎರಡು ಮನೆಗಳ ಬಾಗಿಲಿನ ಕೊಂಡಿಗಳನ್ನು ಮುರಿದು ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ತಡರಾತ್ರಿಯಲ್ಲಿ ನಡೆದಿದ್ದು, ಸಿಸಿ ಟಿವಿ ಕಣ್ಗಾವಲಿನಲ್ಲಿರುವ ಸುಮಾರು ಎಳು ಜನರ ಗುಂಪಿನ ಕಳ್ಳರ ಚಲನವಲನಗಳ ದೃಶ್ಯಾವಳಿಗಳು ಸೆರೆಯಾಗಿವೆ.  

ರವಿ ತೇಲಿ ಅವರ ನಿವಾಸದ ಕಿಡಕಿ ಮುರಿದಿದ್ದಾರೆ. ತೆಗ್ಗಿ ಅವರ ಕಚೇರಿಯ ಕೀಲಿ ಮುರಿದು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. 7 ಜನರು ಮುಖಕ್ಕೆ ಹಾಗೂ ತಲೆಗೆ ಮಂಕಿ ಕ್ಯಾಪ್‌ಗಳನ್ನು ಮತ್ತು ಬಟ್ಟೆಗಳಿಂದ ಮುಖ ಮರೆಸಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡ ಕಳ್ಳರ ಗುಂಪು ಪ್ರಭಾತ ಬಡಾವಣೆಯ ತುಂಬ ಸುತ್ತಾಡಿದ ದೃಶ್ಯಾವಳಿಗಳು ಸೆರೆಯಾಗಿವೆ. 

ಕಳೆದ ಒಂದೂವರೆ ತಿಂಗಳಿನಿಂದ ಕೋಷ್ಠಿಗಲ್ಲಿ, ಸಿದ್ದಮುತ್ಯಾ ಗುಡಿ, ಹೊಕ್ಕಳಬಾವಿ, ದಾನಮ್ಮ ಬಡಾವಣೆ, ಲಕ್ಷ್ಮೀ ನಗರ, ಬಸವ ನಗರ ಹೀಗೆ ಹಲವು ಬಡಾವಣೆಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಯತ್ನ ನಡೆಸಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಮಾತುಗಳು ಕೇಳಿಬರುತ್ತಿದೆ.  

ಪ್ರಭಾತ ನಗರದಲ್ಲಿ ಕಳ್ಳತನಕ್ಕೆ ಯತ್ನ ನಡೆಸಿದ ಸಮಯದಲ್ಲಿ ಅಲ್ಲಿನ ನಿವಾಸಿಗಳು ಪೋಲಿಸರಿಗೆ ಮಾಹಿತಿ ನೀಡಿದ ತಕ್ಷಣ, ಪೋಲಿಸರು ವಾಹನದ ಸೈರಾನ ಸೌಂಡ ಹಚ್ಚಿಕೊಂಡು ಸ್ಥಳಕ್ಕೆ ಬರುವುದನ್ನು ಗಮನಿಸಿದ 7 ಜನರ ಕಳ್ಳರ ಗುಂಪು ಪರಾರಿಯಾಗಿದ್ದಾರೆಂದು ಅಲ್ಲಿನ ನಿವಾಸಿಗಳು ಹೇಳುವ ಮಾತುಗಳು ಕೇಳಿಬರುತ್ತದೆ.