ಸಾಮೂಹಿಕ ಶ್ರಮದಾನದಲ್ಲಿ ಭಾಗವಹಿಸಿದ ಅಧಿಕಾರಿ-ಸಿಬ್ಬಂದಿಗಳು

ಹಾವೇರಿ 30: ಮಹಾತ್ಮ ಗಾಂಧಿ ಅವರ 155 ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ಮೂರು ದಿನಗಳ ಸಾಮೂಹಿಕ ಶ್ರಮದಾನದ  ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೊದಲ ಶುಕ್ರವಾರ  ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಸರ್ಕಾರಿ ಕಚೇರಿಗಳ ಒಳಾಂಗಣ  ಹಾಗೂ  ಸೋಮವಾರ ಹೊರಾಂಗಣ ಸ್ವಚ್ಚತಾ ಕಾರ್ಯ ಜರುಗಿತು. 

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಸ್ವತಃ ಸಲಿಕೆ ಹಾಗೂ ಪೊರಕೆ ಹಿಡಿದು ಸ್ವಚ್ಛತೆಮಾಡುವ ಮೂಲಕ ಶ್ರಮದಾನದಲ್ಲಿ ಭಾಗವಹಿಸಿದ್ದರು.  

ಜಿಲ್ಲಾಡಳಿತ ಭವನದ ಸಂಕೀರ್ಣದಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಶ್ರಮದಾನದಲ್ಲಿ ಭಾಗವಹಿಸಿ ಜಿಲ್ಲಾಡಳಿತ ಸಂಕೀರ್ಣ ಆವರಣದ ಸ್ವಚ್ಛಗೊಳಿಸಿದರು. ಜಿಲ್ಲಾಡಳಿತ ಸಂಕೀರ್ಣದ ಹೊರ ಆವರಣದಲ್ಲಿರುವ ವಿವಿಧ ಕಚೇರಿಗಳ ಮುಖ್ಯಸ್ಥರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ತಾಲೂಕಾ ಕೇಂದ್ರಗಳಲ್ಲೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. 

ಮೂರು ದಿನಗಳ ಶ್ರಮದಾನ ಕಾರ್ಯಕ್ರಮದ ಕುರಿತು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು,  ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ  ನಿರಂತರ  ಸಭೆಗಳನ್ನು ನಡೆಸಯುವ ಯಶಸ್ವಿ ಶ್ರಮದಾನ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ್ದರು.