ಹೂವಿನಹಡಗಲಿ: ಮೆಕ್ಕೆಜೋಳ ಹೊಲಕ್ಕೆ ಕೃಷಿ ನಿದರ್ೇಶಕರು ಭೇಟಿ
ಲೋಕದರ್ಶನ ವರದಿ
ಹೂವಿನಹಡಗಲಿ 20: ತಾಲೂಕಿನ ನಂದಿಹಳ್ಳಿ ಗ್ರಾಮದ ನೀರಾವರಿ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಬಳ್ಳಾರಿ ಜಂಟಿ ಕೃಷಿ ನಿದರ್ೇಶಕ ಡಾ.ಮಲ್ಲಿಕಾರ್ಜುನ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಒಂದು ತಿಂಗಳ ಹಿಂದೆ ನೀರಾವರಿ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ ಗ್ರಾಮದ ರೈತ ಅರುಣಿ ಬಸವರಾಜ ಈಚೆಗೆ ಬೆಳೆಯಲ್ಲಿ ಸೈನಿಕ ಹುಳುಗಳು ಹೆಚ್ಚಾಗಿದ್ದರಿಂದ ಕೃಷಿ ಜಂಟಿ ನಿದರ್ೇಶಕರು ಬೆಳೆಯನ್ನು ವೀಕ್ಷಿಸಿದ ಅವರು ರೈತರು ಕೀಟ ಬಾಧೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವುದರಿಂದ ರೋಗ ನಿಯಂತ್ರಿಸಬಹುದು.ಜತೆಗೆ ಕೀಟನಾಶಕಗಳನ್ನು ಬಳಕೆಯಿಂದ ರೋಗ ಹತೋಟಿಗೆ ತರಬಹುದು ಎಂದರು.
ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಹೊಲಗಳಿಗೆ ಕಳೆದ ಒಂದು ವಾರದಿಂದ ನಿರಂತರ ಕೃಷಿ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಕೀಟ ನಾಶಕಗಳನ್ನು ಸಿಂಪರಣೆಯಿಂದ ರೋಗ ಹತೋಟಿಗೆ ಬಂದಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ನೀಲಾನಾಯ್ಕ ಮಾಹಿತಿ ನೀಡಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಹನುಮಂತಪ್ಪ, ಶ್ರೀಹರಿ, ಕೃಷಿ ಇಲಾಖೆ ಸೌಜನ್ಯ, ಸವಿತಾ, ರೈತರಾದ ಅರುಣಿ ಬಸವರಾಜ, ಪಿ.ವಿ.ಬಸವರಾಜ, ವಿ.ಬಿ.ಶಿವಾನಂದ, ಕಂಠಿ ಆದರ್ಶ, ಎಂ.ವಿರುಪಾಕ್ಷಿ, ಅರುಣಿ ರುದ್ರಪ್ಪ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 