ಅಸ್ಪೃಶ್ಯತಾ ಅರಿವು ಜಾಗೃತಿಗೆ ಬೀದಿ ನಾಟಕ
Street drama for untouchability awareness awareness
ಅಸ್ಪೃಶ್ಯತಾ ಅರಿವು ಜಾಗೃತಿಗೆ ಬೀದಿ ನಾಟಕ
ಹೂವಿನಹಡಗಲಿ 04: ಮನುಷ್ಯ ಜಾತಿ ಧರ್ಮದ ಮುಖಾಂತರ ಹಾಗೂ ಮಾನವೀಯತೆಯಿಂದ ಎಲ್ಲರೂ ಸಾಮರಸ್ಯ ಜೀವನದಲ್ಲಿ ಹಾಗೂ ಆಚಾರ ವಿಚಾರ ನಡೆ-ನುಡಿ ಇಂದ ನಡೆದು ಎಲ್ಲರೂ ಒಂದಾಗಿ ಚೆಂದಾಗಿ ಬಾಳಬೇಕು ಎಂದು ದಲಿತ ಮುಖಂಡ ವಕೀಲರಾದ ಎಚ್ ಪೂಜಪ್ಪ ಕರೆ ನೀಡಿದರು. ತಾಲೂಕಿನ ಸೋಗಿ ಗ್ರಾಮದಲ್ಲಿ ತಾಲೂಕ್ ಆಡಳಿತ ತಾಲೂಕಹ ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆ ಇವರ ಸಯುಕ್ತ ಆಶ್ರಯದಲ್ಲಿ ಅಸ್ಪೃಶ್ಯತಾ ಅರಿವು ಜಾಗೃತಿ ಹಾಗೂ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿವೃತ್ತ ಶಿಕ್ಷಕ ಎಸ್ ನಾಗರಾಜಪ್ಪ ಮಾತನಾಡಿ ಭವ್ಯ ಭಾರತ ಸಂಸ್ಕೃತಿ ಪರಂಪರೆ ಹಾಗೂ ಕನ್ನಡ ನಾಡು ನುಡಿ ಭಾಷೆ ಕಲೆ ಸಾಹಿತ್ಯ ಒಳಗೊಂಡ ಸಂಗಮವಾಗಿದೆ ಇಂಥ ಸಂಗಮದಲ್ಲಿ ಮಾನವ ಜಾತಿ ಎಣಿಸದೆ ನಾವೆಲ್ಲ ಭಾವೈಕ್ಯತೆದಿಂದ ಬದುಕಬೇಕೆಂದರು. ಗ್ರಾ.ಪಂ. ಸದಸ್ಯ ಧರ್ಮ ನಾಯಕ್ ಹೊನ್ನಾ ನಾಯಕ್ ಮುಖಂಡರಾದ ಕುಬೇರ್ಪ ಹಾಲಯ್ಯ ಶಾಸ್ತ್ರಿಗಳು ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು ನಂತರ ಅಸ್ಪೃಶ್ಯತಾ ಜಾಗೃತಿ ಗೀತೆಗಳು ಬೀದಿ ನಾಟಕ ಅಂಗೂರಿನ ಚಂದ್ರಶೇಖರ್ ಕಲಾಬಳಗದ ಕಲಾವಿದರಾದ ಕೆ ಸಿ ಪರಶುರಾಮ್ ಕೆ ಅಶೋಕ್ ನಾಗಪ್ಪ ಹಾವೇರಿ, ನೀಲಮ್ಮ ಕಿರಣ್ ಕುಮಾರ್ ಕೆ ಭೀಮೇಶ್ ಬಿ ರಾಜು ಸಂಗಡಿಗರು ಜಾಗೃತಿ ಗೀತೆ ಮತ್ತು ಬೀದಿ ನಾಟಕ ಪ್ರದರ್ಶನ ಗೊಳಿಸಿ ಜಾಗೃತಿ ಮೂಡಿಸಿದರು ಆರಂಭದಲ್ಲಿ ನಿಲಯ ಪಾಲಕ ಮಹಮ್ಮದ್ ರಫಿ ಸ್ವಾಗತಿಸಿ ಕೊನೆಯಲ್ಲಿ ಸಿದ್ದಲಿಂಗೇಶ ಹಾಲಿಗೆ ನಿರೂಪಿಸಿ ಅಭಿನಂದಿಸಿದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 