ಗ್ರಾಮೀಣ ಪ್ರತಿಭೆಗೆ ಒಲಿದ ಅವಕಾಶ ದಶರಥ ಹಾಡಿಗೆ ದನಿಯಾದ ಕನ್ನಡ ಕೋಗಿಲೆ ಖ್ಯಾತಿಯ 'ದೊಡ್ಡಪ್ಪ
ಬೆಂಗಳೂರು 10: ರಿಯಾಲಿಟಿ ಶೋಗಳ ಅಬ್ಬರದ ನಡುವೆ 2018 ರ ಕನ್ನಡ ಕೋಗಿಲೆ ರಿಯಾಲಿಟಿ ಶೋ ತುಂಬ ದೊಡ್ಡ ಸದ್ದು ಮಾಡಿತ್ತು. ಇದರಲ್ಲಿ ಕನ್ನಡ ಕೋಗಿಲೆ ಶೋ ಕೂಡ ಒಂದು. ಮೂರೆ ಮೂರು ಪೆಗ್ ಹಾಡಿನ ಖ್ಯಾತಿಯ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ, ಸಂಗೀತ ನಿದರ್ೇಶಕ ಸಾಧುಕೋಕಿಲ ಹಾಗೂ ಖ್ಯಾತ ಗಾಐಕಿ ಅರ್ಚನಾ ಇವರು ನಿಣರ್ಾಯಕರಾಗಿದ್ದ ಈ ಶೋನಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಗ್ರಾಮದ ಅಚ್ಚ ಗ್ರಾಮೀಣ ಪ್ರತಿಭೆ ದೊಡ್ಡಪ್ಪ ಮಾದರ ವಿಜೇತರಾಗಿದ್ದರು.
ದೊಡ್ಡಪ್ಪ ಆಕೇಸ್ಟ್ರಾಗಳಲ್ಲಿ ಹಾಡುತ್ತ ತೀರ ಬಡತನದಲ್ಲಿ ಬೆಳೆದ ಪ್ರತಿಭೆ. ರಿಯಾಲಿಟಿ ಶೋಗೆ ಆಯ್ಕೆಯಾದಾಗಲೇ ಬೆಳಗಾವಿ ಜಿಲ್ಲೆಯನ್ನು ಬೆಂಗಳೂರು ಮಟ್ಟದಲ್ಲಿ ಪ್ರತಿನಿಧಿಸಿದ ಹೆಮ್ಮೆ ಇವರದು. ಇವರ ಗಾಯನ ಶ್ರಮಕ್ಕೆ ಪ್ರತಿಭೆಗೆ ಮನಸೋತು ಖ್ಯಾತ ಸಂಗೀತ ನಿದರ್ೇಶಕ ಗುರುಕಿರಣ್ ಅವರು ಇವರಿಗೆ ತಮ್ಮ ಸಂಗೀತ ನಿದರ್ೇಶನದಲ್ಲಿ ಒಂದು ಹಾಡು ಹಾಡಿಸುವ ಭರವಸೆ ನೀಡಿದ್ದರು.ಅದರಂತೆ ವಿ.ರವಿಚಂದ್ರನ್ ನಟಿಸಿರುವ ಎಂ.ಎಸ್.ರಮೇಶ್ ನಿದರ್ೇಶನದ 'ದಶರಥ' ಚಿತ್ರದಲ್ಲಿನ 'ಕರಿ ಕೋಟು ಹಾಕೋರೆಲ್ಲ ಕೇಸು ಗೆಲ್ಲೋದಿಲ್ಲ ಎಂಬ ಹಾಡಿಗೆ ದನಿಯಾಗುವ ಮೂಲಕ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಪದಾರ್ಪಣೆ ಮಾಡಿದ್ದಾರೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 