ಜಮೀನಿನ ಶೆಡ್ಡನಲ್ಲಿ ಬೆಂಕಿ ಅವಘಡ: ಆಕಳು ಸಜೀವ ದಹನ
Fire accident in farm shed: Cows burnt alive
ಸಿಂದಗಿ 04: ತಾಲೂಕಿನ ಕೊಕಟನೂರ ಗ್ರಾಮದ ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡನಲ್ಲಿ 6 ಆಕಳು, ಮಶೀನ್, ಮೇವು, ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಅಗ್ನಿ ಅನಾಹುತದಲ್ಲಿ 4ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ. 4.70ಲಕ್ಷ ರೂ. ಮೌಲ್ಯದ ಹಸು ಹಾಗೂ ಕೆಲವು ವಸ್ತುಗಳ ರಕ್ಷಣೆ ಮಾಡಲಾಗಿದೆ. 1 ಆಕಳು ಸಜೀವ ದಹನವಾಗಿದೆ, ಇನ್ನೊಂದಕ್ಕೆ ತೀವ್ರ ಗಾಯವಾಗಿದೆ. ರಕ್ಷಣೆಗೆ ಮುಂದಾದ ಮಾಲೀಕ ಸೋಮಲಿಂಗ ಅಗಸರಗೆ ಬೆಂಕಿ ನಿಂದಿಸಲು ಪ್ರಯತ್ನಿಸಿದಾಗ ಸಣ್ಣಪುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿ 4 ಆಕಳು ಹಾಗೂ ಮಾಲೀಕನ್ನು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಎಫ್ಎಸ್ಒಎಂ.ಬಿ.ಪೂಜಾರಿ, ಸಿಬ್ಬಂದಿಗಳಾದ ಶೀಮಲಿಂಗಯ್ಯಮಠ, ರವಿ ನಾಯಕ, ಶ್ರೀಧರ ರತ್ನಪ್ಪಗೋಳ, ವಿಜಯಕುಮಾರ ಬಿರಾದಾರ, ಹನುಮಂತ ಕುಂಬಾರಸೇರಿದಂತೆ ಅನೇಕರಿದ್ದರು. ಇನ್ನೂ ಈ ಪ್ರಕರಣ ಸಿಂದಗಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 