ಸಂತ ಸೇವಾಲಾಲ್ರ ಭಕ್ತಿ ಗೀತೆ ಬಿಡುಗಡೆ
ಬೆಂಗಳೂರ 06 : ಬಹುದಿನಗಳ ನಂತರ ಮತ್ತೆ ಶಂಕರ್ ನಾಯ್ಕ್ (ಕವಿರಾಜ್) ಇವರ ಸ್ವರಚಿತ ಸಂತ ಸೇವಾಲಾಲ್ ಅವರ ತಾರ ಮಾರ ಭೇದ ಕಾಯಿರಾ ಭಾಯಾ ಭಕ್ತಿ ಗೀತೆ ಸಿ.ಕೆ.ಪ್ರೊಡಕ್ಷನ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಗೀತೆಯನ್ನು ಸ್ವತಃ ಕವಿರಾಜ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಉತ್ತಮ ಸಾಹಿತ್ಯ ಮತ್ತು ಗಾಯನ ಮಾಡಿರುವ ಶಂಕರ್ ನಾಯ್ಕ್ ಇವರ ಗೀತೆಗೆ ಖ್ಯಾತ ಬಂಜಾರ ಗಾಯಕರಾದ ಕುಬೇರ ನಾಯ್ಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ. ಬಹುನೀರೀಕ್ಷಿತ ಕವಿರಾಜ್ ಇವರ ಅಭಿಮಾನಿಗಳು ಈ ಭಕ್ತಿ ಗೀತೆಯನ್ನು ಕೇಳಿ ಆನಂದಿಸಿ ಪ್ರೋತ್ಸಾಹ ನೀಡುವಂತೆ ಕವಿರಾಜ್ ಹೇಳಿದ್ದಾರೆ.