ಗದ್ದುಗೆಗಾಗಿ “ಕತ್ತಿʼ ಮಸೆಯುತ್ತಿರುವ ಉಮೇಶ್‌ ಕತ್ತಿ... ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು, ಜುಲೈ 20- ರಾಜ್ಯ  ಬಿಜೆಪಿ ಪಕ್ಷದಲ್ಲಿ   ಮುಖ್ಯಮಂತ್ರಿ  ಹುದ್ದೆಗಾಗಿ  ಟವಲ್‌ ಹಾಕುವವರು   ಹೆಚ್ಚಿದ್ದಾರೆ,    ಅಕ್ಕಿ ಕೇಳಿದವರಿಗೆ   “ಹೋಗಿ  ಸಾಯ್ರಿ”  ಎಂದ    ಆಹಾರ  ಸಚಿವ ಉಮೇಶ  ಕತ್ತಿ ಯವರೂ  ಸಹ     ಸಿಎಂ ಸ್ಥಾನಕ್ಕೆ  ತಮ್ಮ ಕತ್ತಿ ಮಸೆಯುತ್ತಿದ್ದಾರೆ  ಎಂದು   ರಾಜ್ಯ  ಕಾಂಗ್ರೆಸ್‌  ವ್ಯಂಗ್ಯವಾಡಿದೆ.
ಬಿಜೆಪಿಯ ಮೀರ್‌ಸಾಧಿಕ್‌  ನಳಿನ್‌ಕುಮಾರ್‌ಕಟೀಲ್‌ ಆಡಿಯೋ ಬಗ್ಗೆ      ಕೈಗಾರಿಕಾ ಸಚಿವ  ಜಗದೀಶ್‌ಶೆಟ್ಟರ್‌ ಮೌನ ವಹಿಸಿದ್ದು,   ಗ್ರಾಮೀಣಾಭಿವೃದ್ದಿ  ಸಚಿವ   ಕೆ.ಎಸ್‌.   ಈಶ್ವರಪ್ಪ ಅವರು   ಕೆರಳಿರುವುದು,   ಅಡಿಯೋ   ಅಸಲಿ,  ಸಂಚು ಕೂಡ ಅಸಲಿ  ಎನ್ನಲು ಸಾಕಲ್ಲವೇ     ಎಂದು    ಕಾಂಗ್ರೆಸ್‌  ಟ್ವೀಟ್‌ಮಾಡಿದೆ.