ತಾಂಬಾ: ಮುಂಗಾರು ಮಳೆ: ಮಾವಿನ ಬೆಲೆ ಕುಸಿತ
ಲೋಕದರ್ಶನ ವರದಿ
ತಾಂಬಾ 12: ಬೇಸಿಗೆಯಲ್ಲಿ ಗುಣಮಟ್ಟ ಕಾಯ್ದುಕೂಳ್ಳುವ ಮಾವು ಮಳೆಗಾಲ ಆರಂಭದ ಬಳಿಕ ಬದಲಾಗುವ ಹವಾಮಾಣಕ್ಕೆ ಹೂಂದಿಕೂಳ್ಳದೆ ಹುಳ(ಕೀಟ)ಕ್ಕೆ ತುತ್ತಾಗುವದರಿಂದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಬೇಡಿಕೆ ಕುಸಿತ ಹಾಗೂ ಇಳುವರಿ ಬಾರದೆ ಇನ್ನೂ ಒಂದು ವಾರ ಮಾತ್ರ ಮಾರುಕಟ್ಟೆಯಲ್ಲಿ ಕಾಣಿಸಿಕೂಳ್ಳಲಿರುವ ಮಾವು ಗುಡ್ ಬೈ ಹೇಳಿದೆ ಎಪ್ರಿಲ್ ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಮಾವು ಆರಂಭದಲ್ಲಿ ತನ್ನ ಎಂದಿನ ಬೇಡಿಕೆ ಕಾಪಾಡಿಕೂಂಡಿತು ಉಳಿದ ಹಣ್ಣುಗಳ ವ್ಯಾಪಾರದ ನಡುವೆ ತನ್ನದೇ ಆದ ಬೇಡಿಕೆಯ ಭರಾಟೆ ಹೆಚ್ಚಿಸಿಕೂಂಡಿತು
ತೋತಾಪುರಿ ರಸಪುರಿ ಮಲ್ಗೋವ ಮಲ್ಲಿಕಾ ನಕ್ಕರೆ ಅಪ್ಟೆಮಿಡಿ ನೀಲಂ ಬಾದಾಮ್ ತಳಿ ಮಾವುಗಳಲ್ಲಿ ರಸಪುರಿ ತೋತಾಪುರಿ ಹಾಗೂ ಮಲ್ಗೋವಕ್ಕೆ ಉತ್ತರ ಕರ್ನಾಟಕದಲ್ಲಿ ಬೇಡಿಕೆ ಜೂರಾಗಿತ್ತು ಮೇ ಮದ್ಯ ಭಾಗದಲ್ಲಿ ಪ್ರತಿಶತ 50ರಷ್ಟ ಕುಂದಿದ ವ್ಯಾಪಾರ ಜೂನ ನಲ್ಲಿ ಅಲ್ಲಲ್ಲಿ ಮಳೆ ಆದರಿಂದ ಮತ್ತಷ್ಟ ಕುಸಿದಿದೆ ಮಲ್ಗೋವ ಡಜನ್ (12 ಹಣ್ಣುಗಳಿಗೆ) 150ರಿಂದ 180 ರೂ ತೋತಾಪುರಿ 60 ರಿಂದ 100 ರೂ ಹಾಗೂ ರಸಪುರಿ 100 ರಿಂದ 130 ರೂ ಗಳಿಗೆ ಮಾರಾಟವಾಗುತ್ತಿದೆ
ಮಾವು ಮಾರಾಟ ಈ ಬಾರಿ ಅಷ್ಟೆನು ಆಶಾದಾಯಕವಾಗಿಲ್ಲ ಕಳೆದ ಬಾರಿ ಸ್ವಲ್ಪ ಲಾಭ ಮಾಡಿಕೂಂಡಿದ್ದ ನಾವು ಈಗ ವ್ಯಾಪಾರದಲ್ಲಿ ಕಳೆದು ಕೂಂಡಿದ್ದೆ ಹೆಚ್ಚು ಸಾಲ ಮಾಡಿ ಮಾವಿನ ಹಣ್ಣು ವ್ಯಾಪಾರಕ್ಕೆ ತೂಡಿಗಿಸಿದ ಹಣ ವಾಪಸ್ಸು ಬಂದಿಲ್ಲ ಎಂದು ಸುದ್ದಿಗಾರರಿಗೆ ಮಾವು ವ್ಯಾಪಾರಿ ಸೈದಮ್ಮ ನಧಾಪ ತಿಳಿಸಿದ್ದಾರೆ ಜೂನ್ ತಿಂಗಳ ಕೂನೆಯ ದಿನಗಳ ವರೆಗೆ ಹಣ್ಣುಗಳ ರಾಜ ಮಾರುಕಟ್ಟೆಯಲ್ಲಿ ತನ್ನ ಎಂದಿನ ವೈಭವ ಮೆರೆದು ಜುಲೈ ತಿಂಗಳಲ್ಲಿ ತನ್ನ ವೈಭವ ಕೂಂದಿಸಿಕೊಂಡು ಮುಂದಿನ ವರ್ಷದ ವರೆಗೆ ಮಾವು ಪ್ರೀಯರಿಗೆ ಗುಡ್ ಬೈ.
ಕಳಪೆ ಕಾಮಗಾರಿ ಸೆತುವೆ ಗೊಡೆಗಳಲ್ಲಿ ಬಿರುಕು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 