ಎಲ್ಲರೊಂದಿಗೆ ಬೆರೆತು ಬದುಕು ನಡೆಸಿ: ಶಿವಕುಮಾರ
ಲೋಕದರ್ಶನವರದಿ
ರಾಣೆಬೆನ್ನೂರು 30: ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿ ಎಲ್ಲರೊಂದಿಗೆ ಬೆರೆತು ಬದುಕು ನಡೆಸಬೇಕು, ಇದು ನಮ್ಮ ಪ್ರಗತಿಗೆ ಪೂರಕವಾಗುತ್ತದೆ ಎಂದು ಪ್ರಾಂಶುಪಾಲ ಡಾ| ಬಿ.ಶಿವಕುಮಾರ ಹೇಳಿದರು.
ನಗರ ಹೊರವಲಯದ ಶ್ರೀತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾಥರ್ಿಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮುಖಮಾಡುತ್ತಿರುವುದು ಭಾರತ ದೇಶದ ಇತಿಹಾಸ ಪರಂಪರೆಯ ಜನಪದ ಕಲೆಯು ನಶಿಸುವಂತಾಗಿದೆ. ಸಂಸ್ಕೃತಿ ಪರಂಪರೆಯ ದೇಶೀಯ ಸಾಂಪ್ರದಾಯಿಕ ಜೀವನ ಬಿಂಬಿಸುವ, ಉಡುಗೆ ತೊಡುಗೆಗಳನ್ನು ತೊಡುವ ಮೂಲಕ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು.
ಪ್ರೊ. ದಿನೇಶ ಮಾಗನೂರ, ಡಾ| ಶಿವಕುಮಾರ ಹೊನ್ನಾಳಿ, ಶಶಿಧರ ಕುರಗೋಡಪ್ಪನವರ ಸೇರಿದಂತೆ ವಿದ್ಯಾಥರ್ಿಗಳು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು. ಕಾಲೇಜಿನ ನೂರಾರು ವಿಧ್ಯಾಥರ್ಿಗಳು ಸಂಸ್ಕೃತಿ ಪ್ರತಿಬಿಂಬಿತ ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಜಾನಪದ, ಕೋಲಾಟ, ಭಜನೆ, ಕುಟ್ಟುವ, ಬೀಸುವ, ಕೋಲಾಟದ ನೃತ್ಯಗಳನ್ನು ಪ್ರದಶರ್ಿಸಿ ಸಾರ್ವಜನಿಕರ ಗಮನ ಸೆಳೆದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 