ಕಂಪ್ಲಿ: ಲೋಕ ಕಲ್ಯಾಣಕ್ಕಾಗಿ ದೇವತೆಯ ಮೆರವಣಿಗೆ
ಲೋಕದರ್ಶನ ವರದಿ
ಕಂಪ್ಲಿ 24: ರಾಜ್ಯದಲ್ಲಿ ಮಳೆ, ಲೋಕ ಕಲ್ಯಾಣಾಕ್ಕಾಗಿ ಸಿಂದೋಳ್ಳು ಬುಡಕಟ್ಟು ಸಮಾಜದ ವೀರನಾಗಮ್ಮ ದೇವತೆಯ ಕುಂಭ ಪೂಜೆ ಮಾಡದ್ದೆವೇ ಎಂದು ಸಿಂದೋಳ್ಳು ಸಮಾಜದ ರಾಜ್ಯ ಅಧ್ಯಕ್ಷ ರಾವುಲ್ ನಾಗಪ್ಪ ಹೇಳಿದರು ಪಟ್ಟಣದಲ್ಲಿ ವೀರನಾಗಮ್ಮ ದೇವತೆಗಳ ಮೆರವಣಿಗೆಗೆ ಮೂರು ವರ್ಷಗಳಿಗೊಮ್ಮೆ ವೀರನಾಗಮ್ಮನವರ ಪ್ರತಿಮೆಗೆ ಬಣ್ಣ ಕೊಡಿಸುವುದು, ಮೆರವಣಿಗೆ, ಕುಂಭಪೂಜೆ ಹಾಗೂ ವಿವಿಧ ಧಾಮೀಕ ಕಾರ್ಯಕ್ರಮಗಳು ನಡೆದವು
ಮೆರವಣಿಗೆಯಲ್ಲಿ ರಾವುಲ್ ನಾಗಪ್ಪ, ಗಾಳೆಪ್ಪ, ಜಂಬಣ್ಣ ಪೋತರಾಜನ ವೇಷಭೂಷಣ ಧರಿಸಿ ಕುಣಿತ ಪ್ರದರ್ಶಿಸಿದರು. ಸಣ್ಣ ಉರುಮೆಗಳನ್ನು ರಾಜಮ್ಮ, ದುರುಗಮ್ಮ, ಜಂಬಲಮ್ಮ, ಹಾಗೂ ಯಲ್ಲಪ್ಪ, ತಿಪ್ಪಯ್ಯ, ದೊಡ್ಡ ಯಲ್ಲಪ್ಪ ಇವರು ದೊಡ್ಡ ಉರುಮೆಗಳ ವಾದನ ಸೇವೆಯನ್ನು ಸಲ್ಲಿಸಿದರು. ಮೆರವಣಿಗೆಯಲ್ಲಿ ಕಳಸಧಾರತಿ, ಉರುಮೆ ವಾದನಗಳು, ಪೋತರಾಜರು ಪಾಲ್ಗೊಂಡಿದ್ದರು.
ಪಟ್ಟಣದ 22ನೇವಾರ್ಡ್ ಸಿಂಧೋಳ್ಳು ಕಾಲೋನಿಯಲ್ಲಿ ವೀರನಾಗಮ್ಮ ದೇವತೆಯ ಕುಂಭಪೂಜೆ ಸೇರಿ ನಾನಾ ಪೂಜಾ ಕಾರ್ಯಕ್ರಮಗಳು ಅರ್ಚಕ ದುರುಗಪ್ಪ ಪೌರೋಹಿತ್ಯದಲ್ಲಿ ಜರುಗಿದವು. ದೇವಸ್ಥಾನದ ಆವರಣದಲ್ಲಿ ರಂಗೋಲಿ ಹಾಕಿ, ವೀರನಾಗಮ್ಮ ಪ್ರತಿಮೆಯನ್ನು ಫಲಪುಷ್ಪಾದಿಗಳಿಂದ ಶೃಂಗರಿಸಿದ್ದರು. ಕಂಪ್ಲಿ ಸೇರಿ ಸುತ್ತಲಿನ ಗ್ರಾಮಗಳ ಸಿಂಧೋಳ್ಳು ಸಮುದಾಯದವರು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 