ಕಂಪ್ಲಿ: ವಾಸವಿ ಸಂಘದಿಂದ ಮಳೆಗಾಗಿ ಪರ್ಜನ್ಯ ಹೋಮ
ಲೋಕದರ್ಶನ ವರದಿ
ಕಂಪ್ಲಿ 09: ರಾಜ್ಯದಲ್ಲಿಸಂಮೃದ್ಧವಾಗಿ ಮಳೆ,ಬೆಳೆ ಮತ್ತು ಲೋಕ ಕಲ್ಯಾಣಕ್ಕಾಗಿ ಸ್ಥಳೀಯ ವಾಸವಿ ಯುವಜನ ಸಂಘ, ಆರ್ಯವೈಶ್ಯ ಸಂಘದವರಿಂದ, ಇಲ್ಲಿನ ಕಂಪ್ಲಿ. ಕೋಟೆ ಹೊಳೆ ಆಂಜನೇಯ ದೇವಾಸ್ಥಾನ ಆವರಣದಲ್ಲಿ, ಪರ್ಜನ್ಯ ಹೋಮ ಶೃದ್ದ ಭಕ್ತಿಯಿಂದ ಭಾನುವಾರ ಜರುಗಿತು.ತುಂಗಭದ್ರಾ ನದಿಯಲ್ಲಿ ಬ್ರಾಹ್ಮಣರಿಂದ ಜಪ ನಡೆಯಿತು.
ಬಳಿಕ ದೇಗುಲದ ಆವರಣದಲ್ಲಿ ಪುರೋಹಿತರಾದ ನಾಗರಾಜ ಆಚಾರ್, ರಾಮಾಚಾರ್, ಶ್ರೀನಿವಾಸಅಚಾರ್, ವೆಂಕಟೇಶ ಆಚಾರ್, ಹನುಮೇಶ ಆಚಾರ್ ಅವರ ಪೌರೋಹಿತ್ಯದಲ್ಲಿ ಸಂಭ್ರಮದಿಂದ ಪರ್ಜನ್ಯ ಹೋಮ, ಲಕ್ಷ್ಮಿನರಸಿಂಹ ಹೋಮ ಹಾಗೂ ಇತರ ಪ್ರಜೆ ಕಾರ್ಯಕ್ರಮ ನಡೆದವು.
ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಸುಬ್ರಹ್ಮಣ್ಯಂ ಮತ್ತು ಪದಾಧಿಕಾರಿಗಳು, ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿವಿ,ಸುಬ್ಬಾರಾವ್ ಮತ್ತು ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳಿ, ವಾಸವಿ ವಿದ್ಯಾ ಸಂಸ್ಥೆ, ವಾಸವಿ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ ಪದಾದಿಕಾರಿಗಳು ಮತ್ತು ಪಟ್ಟಣ ಸ್ಭೆರಿದಂತೆವಿವಿಧ ಸಮೀಪದ ಗ್ರಾಮಗಳ ವೈಶ್ಯ ಸಮಾಜದವರು ಪಾಲ್ಗೊಂಡಿದ್ದರು.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 