ಮತದಾನ ನಿರೀಕ್ಷಿತ ಪ್ರಮಾಣದಲ್ಲಾಗಲಿ ಆಗಬೇಕು: ಮೆಹೆಂದಳೆ
ರಾಣೇಬೆನ್ನೂರು 28 : ಇಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಮತದಾನವು ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಅಗುತ್ತಿಲ್ಲ. ಕಾರಣ ಬೇರೆ ಬೇರೆ ಊರುಗಳಿಗೆ ಉದ್ಯೋಗಕ್ಕಾಗಿ ವಲಸೆ ಹೊದವರು ಮತದಾನಕ್ಕೆ ಅಡ್ಡ ಆಗಬಾರದೆಂದು, ಸರಕಾರ, ಸರಕಾರಿ ರಜೆ ಘೋಷಿಸಿ ಮತದಾನ ಪ್ರಭುಗಳಿಗೆ ಮತದಾನಕ್ಕಾಗಿ ಆಸ್ಪದ ವದಗಿಸಿಕೊಟ್ಟರೆ ಪ್ರಜೆಗಳು ಆ ರಜೆ ದಿನವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ ಎಂದು ಚಿತ್ರ ಕಲಾವಿದ ಡಾ|| ಜಿ ಜೆ ಮೆಹೆಂದಳೆ ಹೇಳಿದರು.
ತಾಲೂಕಿನ ಕವಲೆತ್ತು ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮತದಾನದಂದು ಊರುಗಳಿಗೆ ಹೋಗಿ ಮತ ಚಲಾಯಿಸುವದನ್ನು ಬಿಟ್ಟು ಹೊಸ ಹೊಸ ತಾಣಗಳಿಗೆ ಪ್ರವಾಸ ಹೋಗುವುದು ಸವರ್ೇ ಸಾಮಾನ್ಯ ವಾದುದು ಕಂಡು ಬರುತ್ತಿದೆ. ಅದಕ್ಕಾಗಿ ಮತದಾನದ ಕಡ್ಡಾಯದ ಅವಶ್ಯಕತೆ ಇದೆ. ಮತದಾನ ಕಡ್ಡಾಯ ಮಾಡಿರಿ, ಮತದಾನ ಮಾಡದವರ ಮತದಾನದ ಗುರುತಿನ ಚೀಟಿ ಆಧಾರ ಕಾರ್ಡನ್ನು ರದ್ದುಪಡಿಸಬೇಕು ಎಂದರು.
ಮೆಹೆಂದಳೆ ರಚಿಸಿದ ಕೊಲಾಜ ಚಿತ್ರವನ್ನು ಶಾಲಾ ಉಪಪ್ರಾಂಶುಪಾಲಿನಿ ಆರ್ ಎ ಪಾಟೀಲರವರು ಬಿಡುಗಡೆ ಮಾಡಿದರು. ಡಿ ಎಚ್ ಎಣ್ಣಿ, ಗ್ರಾಸಿಂ ಕಾಲೋನಿಯ ಆಡಳಿತ ವಿಭಾಗದ ಮಲ್ಲಿಕಾಜರ್ುನ ಶೆಟ್ರ, ಪ್ರಮೋದ ಬಾಪಟರವರು ಸಹ ಶಿಕ್ಷಕೀಯರಾದ ಗೀತಾ ಮರೋಳ, ಆರ್ ಬಿ ಕಂದಾಟಿ, ಎಂ ಸಿ ಆಕರ್ಾಚಾರಿ ಹಾಗೂ ಶಾಲಾ ವಿದ್ಯಾಥರ್ಿಗಳು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 