ವೀರಶೈವ ಸೇವಾ ಸಮಾಜದವರಿಂದ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ
ಈ ಸಂದರ್ಬದಲ್ಲಿ ಬಲಕಂಪೇಟೆಯ ಭಕ್ತರಾದ ಪರ್ಯಾದಾ ಬಿಚ್ಚುರಾಜ್ ಮತ್ತು ಎಚ್.ಆನಂದ ರವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತ
ಲೋಕದರ್ಶನ ವರದಿ
ಶಿಗ್ಗಾವಿ03: ತಾಲೂಕಿನ ಬಿಸನಳ್ಳಿ ಗ್ರಾಮದ ಕಾಶಿ ಪೀಠದ ವೇದ ಆಗಮ ಸಂಸ್ಕೃತ ಯೋಗ ಪಾಠ ಶಾಲೆಯ ವಿದ್ಯಾಥರ್ಿಗಳಿಗೆ ಹೈದರಾಬಾದ ಬಲಕಂಪೇಟೆಯ ವೀರಶೈವ ಸೇವಾ ಸಮಾಜದವರಿಂದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಾಠ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ವಿಶ್ವೇಶ್ವರಯ್ಯ ಶಾಸ್ತ್ರೀಗಳು ಮಾತನಾಡಿ ಶ್ರೀ ಕಾಶಿ ಪೀಠದ ವೇದ ಪಾಠಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಊಟ, ವಸತಿ, ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಕೇವಲ ನಾಲ್ಕು ವರ್ಷಗಳ ಹಿಂದೆ ಬೆರಳೆಣಿಕೆಯ ವಿದ್ಯಾಥರ್ಿಗಳೊಂದಿಗೆ ಪ್ರಾರಂಭವಾದ ಈ ಪಾಠಶಾಲೆ ಇಗ 150 ವಿದ್ಯಾಥರ್ಿಗಳನ್ನೊಳಗೊಂಡಿದೆ ಎಂದು ಹೇಳಿದರು.
ಪ್ರತಿವರ್ಷ ಲೋಕ ಕಲ್ಯಾಣಾರ್ಥವಾಗಿ ಈ ಬಿಸನಳ್ಳಿ ಗ್ರಾಮದಲ್ಲಿ ನಡೆಯಲಿರುವ ಇಷ್ಟಲಿಂಗ ಮಹಾ ಪೂಜೆ, ಶಿದ್ಧಾಂತ ಶಿಖಾಮಣಿ ಪಾರಾಯಣ, ಆಧ್ಯಾತ್ಮೀಕ ಧರ್ಮ ಭೋದನೆ ಅಂಗವಾಗಿ ನಡೆಯಲಿರುವ ಸಾಮೂಹಿಕ ವಿವಾಹ, ಜಂಗಮವಟುಗಳ ಅಯ್ಯಾಚಾರ, ವೃದ್ದ ದಂಪತಿಗಳ ಜಂಗಮಾರಾಧನೆ ಕಾರ್ಯಕ್ರಮವನ್ನು ಹೈದರಾಬಾದ ಬಲಕಂಪೇಟೆಯ ವೀರಶೈವ ಸೇವಾ ಸಮಾಜದವರು ಬಂದು ಪ್ರತಿವರ್ಷ ನಡೆಸಿಕೊಡುತ್ತಿರುವ ಕಾರ್ಯ ಅತ್ಯಂತ ಮಹತ್ವಪೂರ್ಣ ಕಾರ್ಯವಾಗಿದೆ ಎಂದು ಹೇಳಿದರು.
ವೇದ ಪಾಠಶಾಲೆಯ ವ್ಯವಸ್ಥಾಪಕರಾದ ಗುರುಶಾಂತಪ್ಪ ನರೇಗಲ್ ಮಾತನಾಡಿ ಶ್ರೀ ಕಾಶಿ ಜ. ಡಾ.ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳವರ ಪಾದ ಸ್ಪರ್ಶದಿಂದ ಈ ಬಿಸನಳ್ಳಿ ಗ್ರಾಮ ಸುಕ್ಷೇತ್ರವಾಗಿ ಹೊರಹೊಮ್ಮಿದೆ. ಅವರು ತೆರೆದ ವೇದ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಥರ್ಿಗಳು ಉಚಿತವಾಗಿ ಶಿಕ್ಷಣ ಪಡೆಯುವದರಮೂಲಕ ಈ ನಾಡಿನಾದ್ಯಾಂತ ಧರ್ಮ ಭೋದನೆಯನ್ನು ಬಿತ್ತಿ ಬೆಳೆಯಲು ಸಜ್ಜಾಗುತ್ತಿದ್ದಾರೆ. ಬರುವ ದಿನಗಳಲ್ಲಿ ಜಂಜಾಟದ ಬದುಕಿನಲ್ಲಿ ಬಸವಳಿದ ಮನುಷ್ಯನಿಗೆ ನೆಮ್ಮದಿ ನೀಡುವ ಬಹುದೊಡ್ಡ ಆಧ್ಯಾತ್ಮೀಕ ತಾಣವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 