ರೈತನ ಹೊಲಕ್ಕೆ ಕೃಷಿ ಪರಿಕರ ಮಾರಾಟಗಾರರ ಕ್ಷೇತ್ರ ಭೇಟಿ
ಗದಗ 24: ದೇಶಿ ಕಾರ್ಯಕ್ರಮದಡಿ ಹಾಲಪ್ಪ ಭರಮಪ್ಪ ಗುಂಡಿಕೇರಿ ಅವರ ಹತ್ತಿ ಕ್ಷೇತ್ರಕ್ಕೆ 5ನೇ ತಂಡದ ಪ್ರಶಿಕ್ಷಣಾಥರ್ಿಗಳ ಕ್ಷೇತ್ರ ಭೇಟಿಯನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಗದಗ ವತಿಯಿಂದ ದಿ. 21ರಂದು ನಿಯೋಜಿಸಲಾಗಿತ್ತು. ಬಿ.ಟಿ.ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ಜ್ವಲಂತ ಸಮಸ್ಯೆಯಾಗಿದ್ದು ಅದರ ನಿಯಂತ್ರಣ ಈ ಘಟ್ಟದಲ್ಲಿ ಅತಿ ಅವಶ್ಯವಾಗಿರುತ್ತದೆ.
ಕಾರ್ಯಕ್ರಮದಲ್ಲಿ ಮೋನಸೆಂಟೊ ಕಂಪನಿಯ ಪ್ರತಿನಿಧಿಗಳಾದ ಡಾ.ಶಂಭು ಹಾದಿಮನಿ ಅವರು ಪ್ರಶಿಕ್ಷಣಾರ್ಥಿಗಳಿಗೆ ಬಿ.ಟಿ. ಹತ್ತಿಯ ಕಾಯಿಕೊರಕ ನಿಯಂತ್ರಣದ ಬಗ್ಗೆ ವಿವರಿಸಿದರು. ಕೀಟದ ಭಾದೆಯಿಂದ ಹತ್ತಿಯ ಗುಣಮಟ್ಟ ಕೆಡುವುದರಿಂದ ರೈತರಿಗೆ ಆದಾಯದಲ್ಲಿ ನಷ್ಟವಾಗುತ್ತದೆ ಎಂದು ವಿವರಿಸಿದರು. ಕೆ.ಐ. ಕುರುಗೋಡ ಹಾಗೂ ಎಸ್.ಎ. ಸೂಡಿಶೆಟ್ಟರ್, ಫೆಸಿಲಿಟೇಟರ್, ದೇಶಿ ಕಾರ್ಯಕ್ರಮ ಕೃವಿಶಿಕೇಂದ್ರ, ಗದಗ. ಇವರು ಕೀಟ ನಿಯಂತ್ರಣದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಗದಗ ಜಿಲ್ಲೆಯ ಸುಮಾರು 37 ಕೃಷಿ ಪರಿಕರ ಮಾರಾಟಗಾರರು ಈ ಕ್ಷೇತ್ರ ಭೇಟಿಯಲ್ಲಿ ಪಾಲ್ಗೊಂಡು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಹತ್ತಿ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಸಿ.ಎಂ. ರಫಿ ತಿಳಿಸಿದ್ದಾರೆ.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 