ರೈತನ ಹೊಲಕ್ಕೆ ಕೃಷಿ ಪರಿಕರ ಮಾರಾಟಗಾರರ ಕ್ಷೇತ್ರ ಭೇಟಿ
ಗದಗ 24: ದೇಶಿ ಕಾರ್ಯಕ್ರಮದಡಿ ಹಾಲಪ್ಪ ಭರಮಪ್ಪ ಗುಂಡಿಕೇರಿ ಅವರ ಹತ್ತಿ ಕ್ಷೇತ್ರಕ್ಕೆ 5ನೇ ತಂಡದ ಪ್ರಶಿಕ್ಷಣಾಥರ್ಿಗಳ ಕ್ಷೇತ್ರ ಭೇಟಿಯನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಗದಗ ವತಿಯಿಂದ ದಿ. 21ರಂದು ನಿಯೋಜಿಸಲಾಗಿತ್ತು. ಬಿ.ಟಿ.ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ಜ್ವಲಂತ ಸಮಸ್ಯೆಯಾಗಿದ್ದು ಅದರ ನಿಯಂತ್ರಣ ಈ ಘಟ್ಟದಲ್ಲಿ ಅತಿ ಅವಶ್ಯವಾಗಿರುತ್ತದೆ.
ಕಾರ್ಯಕ್ರಮದಲ್ಲಿ ಮೋನಸೆಂಟೊ ಕಂಪನಿಯ ಪ್ರತಿನಿಧಿಗಳಾದ ಡಾ.ಶಂಭು ಹಾದಿಮನಿ ಅವರು ಪ್ರಶಿಕ್ಷಣಾರ್ಥಿಗಳಿಗೆ ಬಿ.ಟಿ. ಹತ್ತಿಯ ಕಾಯಿಕೊರಕ ನಿಯಂತ್ರಣದ ಬಗ್ಗೆ ವಿವರಿಸಿದರು. ಕೀಟದ ಭಾದೆಯಿಂದ ಹತ್ತಿಯ ಗುಣಮಟ್ಟ ಕೆಡುವುದರಿಂದ ರೈತರಿಗೆ ಆದಾಯದಲ್ಲಿ ನಷ್ಟವಾಗುತ್ತದೆ ಎಂದು ವಿವರಿಸಿದರು. ಕೆ.ಐ. ಕುರುಗೋಡ ಹಾಗೂ ಎಸ್.ಎ. ಸೂಡಿಶೆಟ್ಟರ್, ಫೆಸಿಲಿಟೇಟರ್, ದೇಶಿ ಕಾರ್ಯಕ್ರಮ ಕೃವಿಶಿಕೇಂದ್ರ, ಗದಗ. ಇವರು ಕೀಟ ನಿಯಂತ್ರಣದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಗದಗ ಜಿಲ್ಲೆಯ ಸುಮಾರು 37 ಕೃಷಿ ಪರಿಕರ ಮಾರಾಟಗಾರರು ಈ ಕ್ಷೇತ್ರ ಭೇಟಿಯಲ್ಲಿ ಪಾಲ್ಗೊಂಡು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಹತ್ತಿ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಸಿ.ಎಂ. ರಫಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 