ಉಗಾರ ಖುರ್ದ-ಉಗಾರ ಬುದ್ರುಕ ಮಧ್ಯ ಸಂಚಾರ ಸೇವೆ ಕಡಿತ
ಉಗಾರ ಖುರ್ದ-ಉಗಾರ ಬುದ್ರುಕ ಗ್ರಾಮಗಳ ಮಧ್ಯದಲ್ಲಿ ನದಿಯ ಹಿನ್ನೀರು ಬಂದಿದ್ದರಿಂದ ಸಂಚಾರ ಸೇವೆಗೆ ತೊಂದರೆಯಾಗುತ್ತಿದೆ
ಕಾಗವಾಡ 20: ಕಾಗವಾಡ ತಾಲೂಕಿನ ಉಗಾರ ಖುರ್ದ-ಉಗಾರ ಬುದ್ರುಕ ಮಧ್ಯದಲ್ಲಿ ಚಿಕ್ಕೋಡಿ ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಸಂಸದರ ನಿಧಿಯಿಂದ 5 ಕೋಟಿ ರೂ. ವೆಚ್ಚಮಾಡಿ ಸೇತುವೆ ನಿಮರ್ಿಸಿದರು. ಕಾಮಗಾರಿ ಪೂರ್ಣಗೊಳಿಸದೆ ಇದಿದ್ದರಿಂದ, ಕೃಷ್ಣಾ ನದಿಗೆ ಬಂದಿರುವ ಮಹಾಪುರದ ಹಿನ್ನೀರಿನಿಂದ ಎರಡು ಗ್ರಾಮಗಳ ಮಧ್ಯ ನೀರು ತುಂಬಿದ್ದರಿಂದ, ಸಂಚಾರ ಸೇವೆ ಕಡಿತಗೊಂಡಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ ನದಿಗೆ ಮಹಾಪೂರ ಬಂದಿದ್ದು, ಈಗಾಗಲೇ ಉಗಾರ-ಕುಡಚಿ ಮಧ್ಯದ ಸೇತುವೆ ನೀರಿನಲ್ಲಿ ಮುಳಗಿದೆ. ಸೇತುವೆ ಮೇಲಿಂದ 7 ಅಡಿ ನೀರು ಹರಿದು ಹೋಗುತ್ತಿದೆ. ನದಿಯ ಹಿನ್ನೀರು ಉಗಾರ ಗ್ರಾಮದ ರಸ್ತೆ ಮೇಲೆ ತುಂಬಿದೆ. ಇದರಿಂದ ಎರಡು ಗ್ರಾಮಗಳ ದಿನನಿತ್ಯದ ಸಂಚಾರ ಸೇವೆ ಕಡಿತಗೊಂಡಿದೆ.
ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಇವರು 5 ಕೋಟಿ ರೂ. ವೆಚ್ಚಮಾಡಿ ಉಗಾರದ ಸೇತುವೆ ನಿಮರ್ಿಸಿದ್ದರೂ ಸೇತುವೆ ಎರಡು ದಡಗಳು ಯೆತ್ತರಿಸದೆ ಇದ್ದಿದ್ದರಿಂದ, ತೆಗ್ಗು ಪ್ರದೇಶದಲ್ಲಿ ಹಿನ್ನೀರು ತುಂಬಿದೆ. ಇದರಿಂದ ಸಂಚಾರ ಸೇವೆ ಕಡಿತಗೊಂಡಿದೆ. ಶೀಘ್ರದಲ್ಲಿ ಸಂಸದರು ಸೇತುವೆ ಉಳಿದ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಬೇಕು ಮತ್ತು ಪ್ರತಿ ವರ್ಷ ಮಳೆಗಾಲದಲ್ಲಿ ಆಗುತ್ತಿರುವ ಈ ತೊಂದರೆಯಿಂದ, ಪ್ರಯಾಣಿಕರಿಗೆ ನೆಮ್ಮದಿ ನೀಡಬೇಕೆಂದು ಸುರೇಶ ವಾಘಮೋಡೆಯೊಂದಿಗೆ ಇನ್ನೂಳಿದ ಪ್ರಯಾಣಿಕರು, ವಾಹನದಾರರು ಆಗ್ರಹಿಸಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 