ಚರಂಡಿ ಮುಚ್ಚಿದ್ದರಿಂದ ಚರಂಡಿ ತುಂಬ ಕಸ
ಯರಗಟ್ಟಿ, 27; ಪಟ್ಟಣದ ಮಹಾತ್ಮಾ ಗಾಂಧಿ ರಸ್ತೆ ಪಕ್ಕದಲ್ಲಿರುವ ಮತ್ತು ಸಂಗೋಳಿ ರಾಯಣ್ಣ ವೃತದ ಎದುರಿಗೆ ಬೆಳಗಾವಿ, ಬಾಗಲಕೋಟ, ಗೋಕಾಕ, ಸವದತ್ತಿ ರಸ್ತೆಯ ಚರಂಡಿ ತುಂಬ ಕಸ, ತ್ಯಾಜ, ಮಣ್ಣು. ವಸ್ತುಗಳು ಸಂಗ್ರಹದಿಂದ ಪೂರ್ತಿ ಚರಂಡಿ ಮುಚ್ಚಿದ್ದರಿಂದ ನೀರು ಸಾಗದೆ ಚರಂಡಿ ತುಂಬ ಆವರಿಸಿಕೊಂಡಿದೆ. ವ್ಯಾಪರಸ್ಥರಿಗೆ ತುಂಬಾ ವಾಸನೆ, ಮತ್ತು ಗಬ್ಬು ನಾರುತ್ತದೆ, ಜಿಲ್ಲಾ ಪಂಚಾಯತ ಬೆಳಗಾವಿ. ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ, ಸಾಕಷ್ಟು ಭಾರಿ ಲಿಖಿತವಾಗಿ ಮನವಿ ಮಾಡಿದ್ದೇವೆ. ಆದರೂ ಸ್ವಚ್ಚತೆ ಕ್ರಮ ವಹಿಸಲ್ಲ, ಬರೇ ಕುಂಠ ನೇಪ ಹೇಳಿ ಜಾರಿಕೊಳ್ಳತ್ತಾರೆ. ಇದರಿಂದ ಸ್ವಚ್ಚತೆ ಮರೀಚಿಕೆ ಆಗಿದೆ, ಈಗಲಾದರೂ ಪಟ್ಟಣ ಪಂಚಾಯತ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಚರಂಡಿ ಸಮಸ್ಯೆ ಬಗೆಹರಿಸಬೇಕು,
ಪಾದರಕ್ಷಿ ಅಂಗಡಿ. ಮಾಲಿಕ ಭರಮಾಜಿ ಬಸವಂತಪ್ಪ ಅರಳಿಮಟ್ಟಿ, ರಾಮಣ್ಣ ಪಾಳೇಕಾರ, ಹೊಟೇಲ ಅಂಗಡಿ ಮಾಲಕರು ನೀಲಪ್ಪ ಬಾರ್ಕಿ, ಮುನ್ನಾ ಹೊರಟ್ಟಿ, ರಫೀಕ ದಿಲಾವರನಾಯ್ಕ ಸ್ಥಳಿಯರು