ಬ್ಯಾಂಕ ಅಧಿಕಾರಿಗಳಿಗೆ ರೈತ ಸಂಘ ಕಾರ್ಯಕರ್ತರು ದಿಗ್ಬಂಧನ
ಮೂಡಲಗಿ ಸಮೀಪದ ಜೋಕಾನಟ್ಟಿ ಗ್ರಾಮಕ್ಕೆ ಸಾಲ ವಸೂಲಾತಿಗಾಗಿ ಬಂದ ಬ್ಯಾಂಕ ಅಧಿಕಾರಿಗಳಿಗೆ ರೈತ ಸಂಘ ಕಾರ್ಯಕರ್ತರು ದಿಗ್ಬಂಧ
ಮೂಡಲಗಿ 07: ಸಾಲ ವಸುಲಾತಿಗಾಗಿ ಬಂದ ಗೋಕಾಕ ಪ್ರತಿಭಾ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗ್ಬ್ಂಧನ ವಿಧಿಸಿರುವ ಘಟನೆ ಸೋಮವಾರ ಮೂಡಲಗಿ ತಾಲ್ಬ್ನ ಜೋಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಜೋಕಾನಟ್ಟಿ ಗ್ರಾಮದ ಸಿದ್ದವ್ವ ಅಜ್ಜಪ್ಪ ಭಾಗನ್ನವರ, ಲಕ್ಷ್ಮಣ ಬಾಲಪ್ಪ ದಂಡಿನ್ನವರ, ಶಂಕರ ಲಕ್ಷ್ಮಣ ಮಾದರ ಇವರು ತಮ್ಮ ಜಮೀನಗಳ ಮೇಲೆ ಕಳೆದ 6 ವರ್ಷಗಳ ಹಿಂದ ಪಡೆದ ಜಾಮಿನ ಸಾಲದ ಮೊತ್ತ 3 ಲಕ್ಷ ರೂ. ಮತ್ತು ಬಡ್ಡಿ 2,60,200 ರೂಗಳ ವಸೂಲಾತಿಗಾಗಿ ಜಮೀನು ಹರಾಜಿಗಾಗಿ 25-6-2018 ರಂದು ನೀಡಿದ ನೋಟಿಸಿಗೆ ಸಾಲಗಾರರು ಸುಮಾರು 80 ಸಾವಿರ ರೂ.ಗಳನ್ನು 17-4-18 ರಂದು ಬ್ಯಾಂಕಿಗೆ ತುಂಬಿದರೂ ಸಹ ರೈತರಿಗೆ ಕಾಲಾವಕಾಶ ಕೊಡದೆ ಆ.6 ರಂದು ಜೋಕಾನಟ್ಟಿ ಗ್ರಾಮಕ್ಕೆ ಜಮೀನು ಹರಾಜು ಮಾಡಲು ಮುಂದಾದಾಗ ಬೆಳಗಾವಿ ಜಿಲ್ಲಾ ರೈತ ಸಂಘದ ಪದಾಧಿಕಾರಿ ವಸೂಲಾತಿಗಾಗಿ ಬಂದ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿರುದರಿಂದ ಅಧಿಕಾರಿಗಳು ಸಾಲ ಮರು ಪಾವತಿಗಾಗಿ ಕಾಲಾಅವಕಾಶ ನೀಡುವದಾಗಿ ಭರವಸೆ ನೀಡಿದ ನಂತರ ದಿಗ್ಬಂಧನದಿಂದ ಮುಕ್ತಗೊಳಿಸಿದ್ದರು.
ರೈತ ಸಂಘದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮುತ್ತಪ್ಪ ಭಾಗನ್ನವರ, ಹಣಮಂತ ಬಿಳ್ಳುರ, ಮಹಾದೇವ ಗೋಡೆರ, ಕುಮಾರ ತೇಲಿ, ವಿವೇಕ ಸನದಿ, ಮಹಾಂತೇಶ ರಡ್ಡೇರಟ್ಟಿ, ಬಸು ಪಡದಳ್ಳಿ, ಪಾಂಡುರಂಗ ಬಿರಗಡ್ಡಿ, ಭೀಮಶಿ ಹುಲಕ್ಕುಂದ, ಕಲ್ಲಪ್ಪ ಉಪ್ಪಾರ, ವಿಠ್ಠಲ ಪೂಜೇರಿ ಮತ್ತಿತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 