ಸಕಲ ಸರ್ಕಾರಿ ಗೌರವದೊಂದಿಗೆ ಸುಬೇಧಾರ ಧರ್ಮರಾಜ ಅಂತಿಮ ಸಂಸ್ಕಾರ
Subedar Dharmaraja cremated with full state honours
ಚಿಕ್ಕೋಡಿ 27: ಕಳೆದ ಸೋಮವಾರ ದಿ.23 ರಂದು ಮಣಿಪುರದ ರಾಜ್ಯದ ಬಂಬಲಾ ಗ್ರಾಮದ ಹತ್ತಿರ ಘಾಟಿನಿಂದ ಕೆಳಗೆ ಬರುವಾಗ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ಚಿಕ್ಕೋಡಿ ತಾಲೂಕಿನ ಕುಪ್ಪಾಣವಾಡಿ ಗ್ರಾಮದ ಸುಬೇಧಾರ ಧರ್ಮರಾಜ ಸುಭಾಷ ಖೋತ ಪಾರ್ಥಿವ ಶರೀರ ಗುರುವಾರ ಆಗಮಿಸಿದ ಹಿನ್ನಲ್ಲೆಯಲ್ಲಿ ಸರ್ಕಾರಿ ಗೌರವದೊಂದಿಗೆ ವೀರಯೋಧನ ಅಂತಿಮ ವಿಧಿವಿಧಾನ ಜರುಗಿತು.
ವೀರಯೋಧ ಧರ್ಮರಾಜ ಖೋತ ಪಾರ್ಥಿವ ಶರೀರ ಮಣಿಪುರದಿಂದ ವಿಶೇಷ ವಿಮಾನದ ಮೂಲಕ ಗೋವಾಕ್ಕೆ ಬಂದು ಅಲ್ಲಿಂದ ಬೆಳಗಾವಿ ಮರಾಠ ಲೈಪ್ ಇನ್ಫಂಟ್ರಿಗೆ ಆಗಮೀಸಿ ಅಲ್ಲಿಂದ ಸೇನಾ ವಾಹನದಲ್ಲಿ ನೇರವಗಿ ಕುಪ್ಪಾಣವಾಡಿಗೆ ಆಗಮೀಸಿತು. ವೀರಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮೀಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಗಿಲು ಮುಟ್ಟಿತ್ತು. ವೀರಯೋಧನಿಗೆ ತಂದೆ ಸುಭಾಷ, ತಾಯಿ ಶಕುಂತಲಾ, ಪತ್ನಿ ಶ್ರದ್ಧಾ ಮತ್ತು ಇಬ್ಬರು ಗಂಡು ಮಕ್ಕಳು ತಂದೆಯ ಪಾರ್ಥಿವ ಶರೀರ ನೋಡಿ ರೋಧಿಸಿದರು.
ಪಾರ್ಥಿವ ಶರೀರ ಗ್ರಾಮಕ್ಕೆ ಆಗಮೀಸುತ್ತಿದ್ದಂತೆ ಗ್ರಾಮಸ್ಥರು ಮತ್ತು ಮಾಜಿ ಸೈನಿಕರು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಧರ್ಮರಾಜ ಅಮರಹೇ ಎಂದು ಘೋಷನೆ ಮೊಳಗಿಸಿದರು. ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಮುಂತಾದವರು ವೀರಯೋಧನಿಗೆ ನಮನ ಸಲ್ಲಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 