ತಾಂಬಾ: ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ
ಲೋಕದರ್ಶನ ವರದಿ
ತಾಂಬಾ 27: ಹಣ ಧಾನ ಮಾಡುವದು ದೊಡ್ಡದಲ್ಲ ತನುದಾನ ಮಾಡುವದು ದೊಡ್ಡದು ಕಾಮಧೇನು ಹರಿಯುವ ನದಿ ಗಿಡಗಳು ಸ್ವಾರ್ಥವನ್ನು ಬಯಸುವದಿಲ್ಲ ನಾವು ಅದೆ ರೀತಿಯಾಗಬೇಕು ಈಗ ದೇಶದಲ್ಲಿ ಡೊಂಗಿ ರಾಜಕಾರಣ ತಾಂಡವಾಡುತ್ತಿದೆ ಎಂದು ಸಮಾಜ ಸೇವಕ ಎಸ್ ಡಿ ಕುಮಾನಿ ಹೇಳಿದರು.
ಹೊನ್ನಳ್ಳಿ ಗ್ರಾಮದ ಶಿವಶರಣೆ ನಿಂಬೆಕ್ಕ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಿವಶರಣೆ ನಿಂಬೆಕ್ಕ ಪೌಢ ಶಾಲೆಯ ಹಾಗೂ ಡಿ.ಎಮ್.ಕುಮಾನಿ ಪದವಿ ಪೂರ್ವ ಮಾಹಾವಿದ್ಯಾಲಯಗಳ ಸಯುಕ್ತ ಆಶ್ರಯದಲ್ಲಿ ಥಿಯಾಸೊಪಿಕಲ್ ಸೋಸೈಟಿ ವತಿಯಿಂದ ಉಚಿತ ನೋಟ ಬುಕ್ ವಿತರಿಸಿ ಮಾತನಾಡಿ ಚುನಾವಣೆ ಒಂದು ಜಾತ್ರೆ ಅದು ಪವಿತ್ರವಾದದ್ದು ಕೂಡಾ ಅಧಿಕಾರ ಎಲ್ಲರ ಕೈಯಲ್ಲಿ ಇದೆ ಬಡವರ ರೈತರ ಪರ ಹೋರಾಟ ಮಾಡುವವರಿಗೆ ಮತನೀಡಿ ಎಂದರು.
ಥಿಯಾಸೊಪಿಕಲ್ ಸೋಸೈಟಿ ತಮ್ಮ ಸ್ವಂತ ಖಚರ್ಿನಲ್ಲಿ ಮಕ್ಕಳಿಗೆ ನೋಟ ಬುಕ ಮತ್ತು ಪೇನ್ನ ಉಚಿತವಾಗಿ ಹತ್ತು ವರ್ಷದಿಂದ ವಿತರಿಸುತ್ತಿರುವದು ಶ್ಲಾಂಘನೀಯ ಎಂದರು.
ಕಾರ್ಯಕ್ರಮದಲ್ಲಿ ವೇದ ಮೂರ್ತಿ ಶಿವಮೂತರ್ಿಯ ಹಿರೇಮಠ ಸ್ವಾಮಿಗಳು ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು ಜಿ.ಕೆ.ಜಹಗೀರದಾರ ಪ್ರಸ್ಥಾವಿಕವಾಗಿ ಮಾತನಾಡಿದರು. ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾಥರ್ಿ ಶ್ರೀನಿವಾಸ ಸಂಸ್ಥೆಯ ಅಧ್ಯಕ್ಷ ಎಸ್.ಡಿ.ಕುಮಾನಯವರು ಸನ್ಮಾನಿಸಿ ಬಹುಮಾನ ನೀಡಿದರು.
ವಠಲ ಬಾವಿಕಟ್ಟಿ, ರಾಮಗೊಂಡ ತೊನಶ್ಯಾಳ, ಮಲ್ಲಿಕಾಲ್ಲಿರ್ಜನ ಮಾಲಗಾರ, ಗುರಣ್ಣ ವಾಡೆದ, ಪಿ.ಎಸ್.ಕುಮಾನಿ, ಸಿ.ಎಸ್.ಗೊಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಎಚ್.ಪಿ.ದೇಶಪಾಂಡೆ ಸ್ವಾಗತಿಸಿದರು. ಬಿ.ಆರ್.ಲಾಳಿ ನಿರೂಪಿಸಿದರು ಎಸ್.ಎಮ್.ಪಾಠಕ್ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 