ಸುಣಧೋಳಿ ಜಡಿಸಿದ್ದೇಶ್ವರ ಜಾತ್ರೆ: ಹಗ್ಗವಿಲ್ಲದ ರಥೋತ್ಸವ
ಮೂಡಲಗಿ 24: ಸಮೀಪದ ಸುಣಧೋಳಿ ಗ್ರಾಮದ ಪವಾಡ ಪುರುಷ ಜಡಿಸಿದ್ದೇಶ್ವರ ಜಾತ್ರೆಯು ಪೀಠಾಧಿಪತಿಗಳಾದ ಶಿವಾನಂದ ಸ್ವಾಮಿಜಿಯವರ ಸಾನಿಧ್ಯದಲ್ಲಿ ಜನಸಾಗರ ಮಧ್ಯ ಮಂಗಳವಾರ ಸಂಭ್ರಮ ಸಡಗರದಿಂದ ಜರುಗಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ಜಡಿಸಿದ್ದೇಶ್ವರ ಸನ್ನಿಧಿಗೆ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು.
ಸಂಜೆ ಜಡಿಸಿದ್ದೇಶ್ವರ ಹಗ್ಗವಿಲ್ಲದ ರಥೋತ್ಸವವೂ ಜನಸ್ತೋಮದ ನಡುವೆ ಪ್ರತಿವರ್ಷದಂತೆ ದೇವಸ್ಥಾನದಿಂದ ಜಡಿಸಿದ್ದೇಶ್ವರರ ಮೂತರ್ಿಯನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸಿದರು. ಸುಣಧೋಳಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸಿದ್ದ ವಿವಿಧ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳು ಸೇರುವುದರೊಂದಿಗೆ ವಾಲಗ, ಶಹನಾಯಿ, ತಮಟೆ, ಡೊಳ್ಳು ವಿವಿಧ ಭಾರತೀಯ ಸಂಸ್ಕೃತಿಯ ಸಂಗೀತದ ನಾದಗಳ ಮಧ್ಯ ಸಾವಿರಾರು ಭಕ್ತರ ಮುಗಿಲು ಮುಟ್ಟುವ 'ಹರಹರ ಮಹಾದೇವ' ಎಂಬ ಘೋಷಣೆ ಕೇಳುತ್ತಿದಂತೆ ಪವಾಡ ಪುರುಷ ಜಡಿಸಿದ್ದೇಶ್ವರ ತೇರು ಹಗ್ಗವಿಲ್ಲದೇ ಚಲಿಸಿ ಮರಳಿ ತನ್ನ ಸ್ಥಾನಕ್ಕೆ ಬಂದು ನಿಂತಿತು.
ರಥದ ಮೇಲೆ ಭಕ್ತರು ಇಷ್ಟಾನುಸಾರ ತೆಂಗಿನಕಾಯಿ, ಬಾಳೆಹಣ್ಣು, ಖಾರೀಕು, ಬತ್ತಾಸು, ಹಾಗೂ ಹೂವನ್ನು ಸಮಪರ್ಿಸಿ ಕೃತಾರ್ತರಾದರು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಭಕ್ತರು ಇದಕ್ಕೆ ಸಾಕ್ಷಿಯಾದರು ನಂತರ ಮಹಾಪ್ರಸಾದ ನಡೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 