ಸುಣಧೋಳಿ ಜಡಿಸಿದ್ದೇಶ್ವರ ಜಾತ್ರೆ: ಹಗ್ಗವಿಲ್ಲದ ರಥೋತ್ಸವ
ಮೂಡಲಗಿ 24: ಸಮೀಪದ ಸುಣಧೋಳಿ ಗ್ರಾಮದ ಪವಾಡ ಪುರುಷ ಜಡಿಸಿದ್ದೇಶ್ವರ ಜಾತ್ರೆಯು ಪೀಠಾಧಿಪತಿಗಳಾದ ಶಿವಾನಂದ ಸ್ವಾಮಿಜಿಯವರ ಸಾನಿಧ್ಯದಲ್ಲಿ ಜನಸಾಗರ ಮಧ್ಯ ಮಂಗಳವಾರ ಸಂಭ್ರಮ ಸಡಗರದಿಂದ ಜರುಗಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ಜಡಿಸಿದ್ದೇಶ್ವರ ಸನ್ನಿಧಿಗೆ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು.
ಸಂಜೆ ಜಡಿಸಿದ್ದೇಶ್ವರ ಹಗ್ಗವಿಲ್ಲದ ರಥೋತ್ಸವವೂ ಜನಸ್ತೋಮದ ನಡುವೆ ಪ್ರತಿವರ್ಷದಂತೆ ದೇವಸ್ಥಾನದಿಂದ ಜಡಿಸಿದ್ದೇಶ್ವರರ ಮೂತರ್ಿಯನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸಿದರು. ಸುಣಧೋಳಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸಿದ್ದ ವಿವಿಧ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳು ಸೇರುವುದರೊಂದಿಗೆ ವಾಲಗ, ಶಹನಾಯಿ, ತಮಟೆ, ಡೊಳ್ಳು ವಿವಿಧ ಭಾರತೀಯ ಸಂಸ್ಕೃತಿಯ ಸಂಗೀತದ ನಾದಗಳ ಮಧ್ಯ ಸಾವಿರಾರು ಭಕ್ತರ ಮುಗಿಲು ಮುಟ್ಟುವ 'ಹರಹರ ಮಹಾದೇವ' ಎಂಬ ಘೋಷಣೆ ಕೇಳುತ್ತಿದಂತೆ ಪವಾಡ ಪುರುಷ ಜಡಿಸಿದ್ದೇಶ್ವರ ತೇರು ಹಗ್ಗವಿಲ್ಲದೇ ಚಲಿಸಿ ಮರಳಿ ತನ್ನ ಸ್ಥಾನಕ್ಕೆ ಬಂದು ನಿಂತಿತು.
ರಥದ ಮೇಲೆ ಭಕ್ತರು ಇಷ್ಟಾನುಸಾರ ತೆಂಗಿನಕಾಯಿ, ಬಾಳೆಹಣ್ಣು, ಖಾರೀಕು, ಬತ್ತಾಸು, ಹಾಗೂ ಹೂವನ್ನು ಸಮಪರ್ಿಸಿ ಕೃತಾರ್ತರಾದರು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಭಕ್ತರು ಇದಕ್ಕೆ ಸಾಕ್ಷಿಯಾದರು ನಂತರ ಮಹಾಪ್ರಸಾದ ನಡೆಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 