ಸೈಯದ್ ಖಾದ್ರಿಗೆ ಸೂಕ್ತ ಸ್ಥಾನ ಮಾನ: ಜಾರಕಿಹೊಳಿಗೆ ಕಾರ್ಯಕರ್ತರಿಂದ ಮನವಿ
ಲೋಕದರ್ಶನ ವರದಿ
ಶಿಗ್ಗಾವಿ 26: ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಪಕ್ಷದ ಅಭ್ಯಥರ್ಿಯನ್ನು ಆಯ್ಕೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು ಕ್ಷೇತ್ರದ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಮತ್ತು ಪುರಸಭೆಗಳಲ್ಲಿ ಆಡಳಿತ ಹಿಡಿದರೂ ಶಾಸಕ ಅಭ್ಯಥರ್ಿಯನ್ನು ಆಯ್ಕೆ ಮಾಡುವಾಗ ಹಿನ್ನಡೆಯಾಗುತ್ತಿರುವುದು ಅಷ್ಟೇ ಸತ್ಯ. ಕಾರಣ ಸ್ಥಳೀಯವಾಗಿ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿಯವರು ಕಾರ್ಯಕರ್ತರಾಗಿ ಹಗಲಿರುಳು ದುಡಿಯುವರಾಗಿದ್ದು ಕಳೆದ ಮೂರು ಭಾರಿಯು ಜಾತಿ ರಾಜಕಾರಣದಿಂದ ಸೋಲು ಕಂಡಿದ್ದು ಇರುತ್ತದೆ. ಪ್ರಸ್ತಕ ಕ್ಷೇತ್ರದಲ್ಲಿ ಮುಖಂಡರಿಲ್ಲದ ಪಕ್ಷವಾಗಿ ಪರಿವರ್ತನೆ ಆಗುತ್ತಿದ್ದು ಇದು ಕಾರ್ಯಕರ್ತರಲ್ಲಿ ಅತೀವ ನಿರಾಶೆಯನ್ನುಂಟು ಮಾಡಿದೆ. ಕಾರಣ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರು ಹಾಗೂ ಪಕ್ಷದ ಮತದಾರರ ಹಿತದೃಷ್ಟಿಯಿಂದ ನಮ್ಮ ಬೇಡಿಕೆ ಒಂದೇ ಸೈಯದ್ ಅಜ್ಜಂಪೀರ ಖಾದ್ರಿಯವರಿಗೆ ಮುಂಬರುವ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನ ಮಾನ ನೀಡಬೇಕೆಂದು ಪಕ್ಷದ ಕಾರ್ಯಕರ್ತರಾದ ಮಂಜುನಾಥ ಮಣ್ಣಣ್ಣವರ ಹಾಗೂ ಎಸ,ಟಿ,ಘಟಕ ಕೆ.ಪಿ.ಸಿ.ಸಿ, ಸದಸ್ಯರಾದ ಪ್ರಕಾಶ ಹಾದಿಮನಿ, ಎ.ಪಿ.ಎಂ.ಸಿ. ಅಧ್ಯಕ್ಷರು ಪ್ರೇಮಾ ಪಾಟೀಲ, ಎ.ಪಿ.ಎಂ.ಸಿ ಉಪಾಧ್ಯಕ್ಷರು ಹನುಮರೆಡ್ಡಿ ನಡುವಿನಮನಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದು ಮನವಿ ಪತ್ರವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ ಜಾರಕಿಹೊಳಿಯವರಿಗೆ ನೀಡಿ ನಂತರ ಸನ್ಮಾನಿಸಿದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 