ಬೆಳಗಾವಿ 11: 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಮೊದಲನೇಯ ದಿನ 09 ರಂದು “ಸಪ್ತರಂಗ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧಿಷ್ಠಾತರಾದ ಸಂಜಯ ಪಾಟೀಲ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಗರ ವಲಯ ಬೆಳಗಾವಿ ರವಿ ಭಜಂತ್ರಿ ಸರ್ ಹಾಗೂ ಉದ್ಯಮಿ, ಶಿಕ್ಷಣ ಪ್ರೇಮಿಯಾದ ಗೋಪಾಲ ಜಿನಗೌಡ ಇವರ ಉಪಸ್ಥಿತಿಯಲ್ಲಿ ದ್ವೀಪ ಪ್ರಜ್ವಲನೆ ಮಾಡುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸುನಿಲ ಪಾಟೀಲ ಇವರು ವೇದಿಕೆ ಮೇಲಿನ ಎಲ್ಲ ಗಣ್ಯರನ್ನು ಸ್ವಾಗತಿಸಿ ತದನಂತರ ಸತ್ಕಾರ ಕಾರ್ಯಕ್ರಮವನ್ನು ನಡೆಯಿಸಿಕೊಟ್ಟರು. ಸಿ.ಎಸ್.ಹೊಸಮನಿ ಅವರಿಂದ ವರದಿ ವಾಚನ ಓದಲಾಯಿತು. ಅದರಂತೆ
ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಅತ್ಯುತ್ತಮ ವಿದ್ಯಾರ್ಥಿಗಳನ್ನು ಪಾರಿತೋಷಕ ನೀಡಿ ಘಣ್ಯರಿಂದ ಅವರನ್ನು ಗೌರವಿಸಲಾಯಿತು. ತದನಂತರ ಮುಖ್ಯ ಅತಿಥಿಗಳಾದ ಗೋಪಾಲ ಜಿನಗೌಡ ಇವರಿಂದ ಲರ್ನಿಂಗ್, ಅರ್ನಿಂಗ್, ಸರ್ವಿಂಗ್ ಎಂಬ ಮಾತುಗಳಿಂದ ಗಮನಸೆಳೆದು ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಿದರು. ಹಾಗೆ ಮತ್ತೋರ್ವ ಅತಿಥಿಗಳಾದ ರವಿ ಭಜಂತ್ರಿ ಅವರೂ ಸಹ ತಮ್ಮ ಅದ್ಭುತ ಮಾತುಗಳಿಂದ ಮಕ್ಕಳನ್ನು ತಮ್ಮೆಡೆಗೆ ಸೆಳೆದರು.
ಕೊನೆಯಲ್ಲಿ ಅಧ್ಯಕ್ಷೀಯ ಭಾಷಣವನ್ನು ಸಂಸ್ಥೆಯ ನಿರ್ದೇಶಕರಾದ ಸನತಕುಮಾರ ವಿ.ವಿ ಇವರು ಮಾಡಿದರು. ವಂದನಾರೆ್ಣಯನ್ನು ಹೆಜಲ್ ಫಿಲ್ಬರ್ಟ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ವೀಣಾ ಮಠಪತಿ ಇವರು ನಡೆಸಿಕೊಟ್ಟರು. ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.