ಹಿರಿಯ ಪತ್ರಕರ್ತ ಚನ್ನಮಲ್ಲಪ್ಪ ಮೆಣಸಿನಕಾಯಿಗೆ ಸನ್ಮಾನ

ಹಿರಿಯ ಪತ್ರಕರ್ತ ಚನ್ನಮಲ್ಲಪ್ಪ ಮೆಣಸಿನಕಾಯಿಗೆ ಸನ್ಮಾನ  Senior journalist Channamallappa Menasinakai felicitated

ಬೈಲಹೊಂಗಲ : ತಾಲ್ಲೂಕಿನ ನೇಸರಗಿ ಹೋಬಳಿಯ ಕಿತ್ತೂರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ನಾಗನೂರ ಗ್ರಾಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಸಂಘಟಕ, ಕನ್ನಡ ಕಟ್ಟಾಳು ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ ( ನೇಸರಗಿ)ಇವರಿಗೆ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ರಮೇಶ ಸೂರನಾಯ್ಕ ಪರವಿನಾಯ್ಕರ ಅವರು ಸನ್ಮಾನಿಸಿ, ಅಭಿನಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ,ಮುಂಜಾನೆಯ ಬೆಳಕು ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಶ್ರೀ ನಂದೀಶ ಮಹಾಂತೇಶ ಮೆಣಸಿನಕಾಯಿ (ಬೆಳಗಾವಿ), ಪತ್ರಕರ್ತ ಶ್ರೀ ಅಪ್ಪಯ್ಯ ಕಮ್ಮಾರ ಉಪಸ್ಥಿತರಿದ್ದರು.