ಎಸ್. ಆರ್ ಶ್ರೀನಿವಾಸರಿಂದ ಆತ್ಮಲಿಂಗಕ್ಕೆ ಪೂಜೆ
ಲೋಕದರ್ಶನ ವರದಿ
ಗೋಕರ್ಣ: ಉಡುಪಿ ಮತ್ತು ಮಂಗಳೂರು ಮಧ್ಯಭಾಗದಲ್ಲಿ ಸಣ್ಣ ಕೈಗಾರಿಕೆ ನಡೆಸಲು ಜಾಗವನ್ನು ಗುರುತಿಸಿದ್ದು ಆಮೂಲಕ ಈ ಭಾಗದ ಜನರಿಗೆ ಪ್ರಥಮ ಆದ್ಯತೆಯ ಮೇರಿಗೆ ಜಾಗ ನೀಡಿ ಸಣ್ಣ ಕೈಗಾರಿಕೆ ಉತ್ತೇಜಿಸಲು ಸಕರ್ಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್. ಆರ್ . ಶ್ರೀನಿವಾಸ ಹೇಳಿದರು ಅವರು ಬುಧವಾರ ಸಂಜೆ ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.ವಿಶೇಷವಾಗಿ ಈ ಭಾಗದ ಪ್ರಮುಖ ಬೆಳೆಯಾದ ತೆಂಗು ಇದರ ನಾರಿನ ಉತ್ಪನ್ನಗಳ ತಯಾರಿಕೆಗಳ ಬಗ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಮಾಡಿದ್ದು,ಅಲ್ಲಿನ ತೆಂಗು ಬೆಳಗಾಗರು ಯಾವ ರೀತಿ ಪೂರಕ ಉತ್ಪನ್ನಗಳನ್ನಾ ದೊಡ್ಡ ಮಟ್ಟದಲ್ಲಿ ತಯಾರುಸುತ್ತಾರೂ ಅದೇ ರೀತಿ ಇಲ್ಲಿನ ತೆಂಗು ಬೆಳಗಾರರ ಪ್ರತಿ ಕುಟುಂಬ ಭಾಗವಹಿಸುವಂತೆ ಮಹಿಳೆಯ ಅಥವಾ ಪುರುಷರ ಸಹಕಾರಿ ಸಂಘ ರೀತಿ 15ಜನರ ಗುಂಪು ರಚಿಸಿ ಆ ಮೂಲಕ ಸಕರ್ಾರ ಉದ್ದಿಮೆ ನಡೆಸುವ ಸಂಘಕ್ಕೆ ಸಕರ್ಾರವೇ ಯುನಿಟ್ ಸ್ಥಾಪಿಸಿ ಕೊಡಲಿದೆ . ಇದರಿಂದ ಬರುವ ತೆಂಗಿನ ನಾರುಗಳ ಬಳಕೆ ಮಾಡುವ ರಸ್ತೆ, ಟೆಕ್ಸಟೈಲ್ ಉದ್ಯಮಕ್ಕೆ ರಫ್ತುಮಾಡಲು ಅನುಕೂಲವಾಗುತ್ತದೆ. ಎಲ್ಲೆಲ್ಲಿ ತೆಂಗು ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಿಗೆ ಪ್ರತಿ ಗ್ರಾಮದಲ್ಲೂ ಈ ಯುನಿಟ್ ಸ್ಥಾಪನೆ ಮಾಡುವುದಾಗಿ ತಿಳಿಸಿದರು. ಈ ಯೋಜನೆ ಈ ತಿಂಗಳ ಕೊನೆಯಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದ್ದ ಇದು ರಾಜ್ಯದಲ್ಲೆ ಪ್ರಥಮವಾಗಿ ಜಾರಿಗೊಳ್ಳುತ್ತಿದೆ ಎಂದು ತಿಳಿಸಿದರು.ಸಚಿವರ ಆಪ್ತರು ಮತ್ತು ಜಿಲ್ಲಾ ಸಣ್ಣಕೈಗಾರಿಕಾ ನಿಗಮದ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 