ರಸ್ತೆ ಅಪಘಾತ: ವ್ಯಕ್ತಿ ಸಾವು

ಜಮಖಂಡಿ 04:  ತಾಲ್ಲೂಕಿನ ಹುಲ್ಯಾಳ- ಮರೆಗುದ್ದಿ ರಸ್ತೆಯ ನಡುವೆ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊರ್ವನು ಸಾವನ್ನಪ್ಪಿದ ಘಟನೆ ಸಂಭವಿಸಿದೆ. 

ತಾಲೂಕಿನ ಮರೆಗುದ್ದಿ ಗ್ರಾಮದ ವಿನೋದ ಮಗದುಮ (20) ಜಮಖಂಡಿಯಿಂದ ಸ್ವಗ್ರಾಮವಾದ ಮರೇಗುದ್ದಿ ಗ್ರಾಮದ ತನ್ನ ಗ್ರಾಮಕ್ಕೆ ಹೋಗುವ ಸಮಯದಲ್ಲಿ ಬೈಕ್ ವೇಗದ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ವಿನೋದ ಮಗದುಮ ಗಂಭೀರವಾಗಿ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದು. ಹಿಂಬದಿಯಲ್ಲಿ ಇದ್ದ ಮುತ್ತು ಬಾರಿಕಾಯಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬರುತ್ತದೆ. ಈ ಕುರಿತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.