ಗಣೇಶನ ವಿಶೇಷ ಪೂಜೆಯಲ್ಲಿ ಜಗದೀಶ ಶೇಟ್ಟರ, ಅನಿಲ ಬೆನಕೆ ಭಾಗಿ

ಬೆಳಗಾವಿ,09: ಸಂಸದ ಜಗದೀಶ ಶೇಟ್ಟರ ಅವರೊಂದಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಅವರು ಸೆ.08 2024 ರಂದು  ಮಹಾಂತೇಶ ನಗರದ ಮಹಾಂತ ಭವನದಲ್ಲಿರುವ ಶ್ರೀ ಗಣೇಶನ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.  

ಈ ಸಂದರ್ಭದಲ್ಲಿ ನಗರಸೇವಕರಾದ ರಾಜಶೇಖರ ಡೊಣಿ, ಸದಾಶೀವ ಹಿರೇಮಠ, ರಾಜು ಗುರವ, ಕೌಜಲಗಿ, ರೋಹಿತ ಹರಿಕಾಂತ, ವಿಭೂತಿ ಹಾಗೂ ಮಹಾಂತೇಶ ನಗರ ರಹವಾಸಿ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.