ತಪ್ಪಿದ ಭಾರಿ ಅನಾಹುತ : ತೆಗ್ಗಿಗೆ ನುಗ್ಗಿದ ಲಾರಿ

ಗುರ್ಲಾಪೂರ 09:   ಗುರ್ಲಾಪೂರ ಬಳಿಯ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಾರಿ ಅನಾಹುತ ತಪ್ಪಿದ ಘಟನೆ ರವಿವಾರದಂದು ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ. 

ಸಾರಿಗೆ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಹಿನ್ನಲೆ ಲಾರಿ ಪಟ್ಲಿಯಾಗಿ ರಸ್ತೆಯ ಪಕ್ಕದ ತೆಗ್ಗಿಗೆ ಬಿದ್ದ ಪರಿಣಾಮ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾರಿಗೆ ಬಸ್‌ದಲ್ಲಿ ಇದ್ದ ಪ್ರಯಾಣಿಕರಿಗೆ ಅದೃಷ್ಟವಶ ಯಾವುದೇ ಗಾಯಗಳಾಗಿಲ್ಲ.