ರಾಷ್ಟ್ರಪತಿಯವರಿಗೆ ಗಂಗಾಮತ ಸಮಾಜದಿಂದ ಮನವಿ ಅರ್ಪಣೆ
ಲೋಕದರ್ಶನ ವರದಿ
ಬೆಳಗಾವಿ : ಘನತೆವೆತ್ತ ರಾಷ್ಟ್ರಪತಿ ರಾಮನಾಥ ಕೋವಿಂದ ಭಾರತ ಸರಕಾರ ಇವರು ಕಳೆದ ತಿಂಗಳ ದಿ.15 ರಂದು ಬೆಳಗಾವಿಗೆ ಭೇಟ್ಟಿ ನೀಡಿದ ಸಂದರ್ಭದಲ್ಲಿ, ಬೆಳಗಾವಿಯ ಸಂಸದರಾದ ಸುರೇಶ ಅಂಗಡಿ ಇವರ ಸಮ್ಮುಖದಲ್ಲಿ ಗಂಗಾರಾಮ ತಳವಾರ, ಜಿಲ್ಲಾ ಅಧ್ಯಕ್ಷರು ಇವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಗಂಗಾಮತ (ಕೋಳಿ) ಸಮಾಜದ ಪದಾಧಿಕಾರಿಗಳು ಗಂಗಾಮತ ಸಮುದಾಯವನ್ನು ಎಸ್.ಟಿ (ಪರಿಶಿಷ್ಟ ಪಂಗಡ) ಮೀಸಲಾತಿಗಾಗಿ ಸೇರಿಸುವ ನಿಟ್ಟಿನಲ್ಲಿ ಸಮಾಜದ 37 ಪರ್ಯಾಯ ಪಂಗಡಗಳ ಕಡತವು ರಜಿಸ್ಟ್ರಾರ ಜನರಲ್ ನವದೆಹಲಿಯವರಲ್ಲಿದ್ದು, ಹಾಗೂ ತಳವಾರ ಮತ್ತು ಪರಿವಾರ ಪಂಗಡಗಳು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಸಲ್ಲಿಸಿರುವ ಪ್ರಯುಕ್ತ, ಇವುಗಳ ಚಾಲನೆಗಾಗಿ ಅಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಜಿಲ್ಲಾ ಗಂಗಾಮತ ಸಮಾಜ ಸಂಘ ಪ್ರಧಾನ ಕಾರ್ಯದಶರ್ಿ ಬಸವರಾಜ ಸುಣಗಾರ, ಪದಾಧಿಕಾರಿಗಳಾದ ರವಿಶಂಕರ ಚನಾಳ, ಶಿವಲಿಂಗಪ್ಪ ಗಸ್ತಿ, ಶಿವರುದ್ರಪ್ಪ ತಳವಾರ(ಬೆಂಗಳೂರು) ಶಿವಲಿಂಗಪ್ಪ(ಬೆಂಗಳೂರು) ಮಾಜಿ ಮಹಾಪೌರರಾದ ಅಪ್ಪಾಸಾಹೇಬ ಪೂಜಾರಿ, ಉಪಮಹಾಪೌರರಾದ ಮಧುಶ್ರೀ ಪೂಜಾರಿ ಅಣ್ಣಾಸಾಹೇಬ ಕೋಳಿ, ಅನೀಲ ಸುಣಗಾರ, ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 