ಅಪಹೃತ ಭಾರತೀಯರಿಬ್ಬರ ಬಿಡುಗಡೆ: ಸುಶ್ಮಾ ಸ್ವರಾಜ್
ಹೊಸದಿಲ್ಲಿ : ವಾಣಿಜ್ಯ ಭೇಟಿಗಾಗಿ ಮಲೇಶ್ಯಕ್ಕೆ ತೆರಳಿದ್ದ ವೇಳೆ ಅಪಹೃತರಾಗಿದ್ದ ಇಬ್ಬರು ಭಾರತೀಯರನ್ನು ಪಾರುಗೊಳಿಸಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ದೃಡೀಕರಿಸಿದ್ದಾರೆ.
ವಾಣಿಜ್ಯ ಪ್ರವಾಸಾರ್ಥ ಮಲೇಶ್ಯಕ್ಕೆ ತೆರಳಿದ್ದ ಆರ್ ವಿ ವೈದ್ಯ ಮತ್ತು ಕೆ ಪಿ ವೈದ್ಯ ಅವರನ್ನು ಇದೇ ಆಗಸ್ಟ್ 3ರಂದು ಅಪಹರಿಸಲಾಗಿತ್ತು.
ಮಲೇಶ್ಯದಲ್ಲಿನ ಭಾರತೀಯ ಹೈಕಮಿಶನರ್ ಮೃದುಲ್ ಕುಮಾರ್ ಮತ್ತು ಅವರ ತಂಡದವರು, ಮಲೇಶ್ಯ ಪೊಲೀಸರು ನಡೆಸಿರುವ ಪ್ರಯತ್ನದ ಫಲವಾಗಿ ಇಬ್ಬರೂ ಭಾರತೀಯ ಪ್ರಜೆಗಳನ್ನು ಪಾರುಗೊಳಿಸಲಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ ಎಂಬುದಾಗಿ ಸುಶ್ಮಾ ಸ್ವರಾಜ್ ಟ್ವಿಟರ್ನಲ್ಲಿ ಹೇಳಿದ್ದಾರೆ.
ಇದೇ ವೇಳೆ ಎಂ ವಿ ಮಹಷರ್ಿ ವಾಮದೇವ ಹಡಗಿನ ಸಿಬಂದಿಗಳಾದ ರೋಹಿತ್ ಪಾಲ್ ಮತ್ತು ರಿಷಬ್ ಗುಪ್ತಾ ಅವರು ಹಡಗಿನಲ್ಲಿ ಎಸಿ ಮತ್ತು ಬೆಳಕು ಇಲ್ಲದಿದ್ದ ಕಾರಣಕ್ಕೆ ಹೀಟ್ ಸ್ಟ್ರೋಕ್ ಗೆ ಗುರಿಯಾಗಿದ್ದು ಅವರನ್ನು ಮರಳಿ ದೇಶಕ್ಕೆ ಕರೆ ತರಲಾಗಿದೆ ಎಂದು ಸಚಿವೆ ಸುಶ್ಮಾ ತಿಳಿಸಿದ್ದಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 