ನ. 2ರಂದು ಮಬನೂರ ಗ್ರಾಮದಲ್ಲಿ ಶ್ರೀ.ಸ.ಸ. ಕರೆಪ್ಪ ಮಹಾರಾಜರ ಮೂತರ್ಿ ಪ್ರತಿಷ್ಠಾಪನೆ
ಲೋಕದರ್ಶನ ವರದಿ
ಮುನವಳ್ಳಿ: ಸಮೀಪದ ಮಬನೂರ ಗ್ರಾಮದಲ್ಲಿ ದಿನಾಂಕ : 2-11-2019 ರಂದು ಮುಂಜಾನೆ : 10-00 ಗಂಟೆಗೆ ಇಂಚಗೇರಿ ಸಾಂಪ್ರದಾಯದ ಶ್ರೀ ಸ.ಸ.ಮಾಧವಾನಂದ ಪ್ರಭೂಜಿಯವರ 104 ನೇ ಜಯಂತ್ಯೋತ್ಸವ, ತೊಟ್ಟಿಲು ಪೂಜೆ,ಸಾಮೂಹಿಕ ವಿವಾಹ ಹಾಗೂ ಶ್ರೀ ಸ.ಸ. ಕರೆಪ್ಪ ಮಹಾರಾಜರ ಅಮೃತಶಿಲಾ ಮೂತರ್ಿ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಸಾನಿಧ್ಯವನ್ನು ಮುನವಳ್ಳಿಯ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ, ಇಂಚಗೇರಿಮಠದ ಶ್ರೀ ಪ್ರಭೂಜಿ ಮಹಾರಾಜರು, ಡಾ. ಎ.ಸಿ.ವಾಲಿ ಮಹಾರಾಜರು, ತುಕಾರಾಮ ಮಹಾರಾಜರು ವಹಿಸುವರು ಉದ್ಘಾಟಕರಾಗಿ ಶಾಸಕ ಆನಂದ ಮಾಮನಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ ಜ್ಯೋತಿ ಬೆಳಗಿಸುವರು. ತೊಟ್ಟಿಲು ಪೂಜೆಯನ್ನು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಸುವಣರ್ಾತಾಯಿ ಹೊಸಮಠ ನೆರವೇರಿಸುವರು.
ಅಧ್ಯಕ್ಷತೆಯನ್ನು ಕರೆಪ್ಪ ಬಾಳಪ್ಪ ಮುರಗೋಡ ವಹಿಸುವರು. ಅತಿಥಿಗಳಾಗಿ ರವೀಂದ್ರ ಯಲಿಗಾರ ಪಂಚನಗೌಡ ದ್ಯಾಮನಗೌಡರ ಫಕೀರಪ್ಪ ಹದ್ದನ್ನವರ ಪುಂಡಲೀಕ ಮೇಟಿ ಸೇರಿದಂತೆ ಇತರರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮಾಧವಾನಂದರ ಹಾಗೂ ಶ್ರೀ ಕರೆಪ್ಪ ಮಹಾರಾಜರ ಮೂತರ್ಿಯ ಭವ್ಯ ಮೆರವಣಿಗೆ ಜರುಗಲಿದೆ. ಎಂದು ಪ್ರಕಟಣೆ ತಿಳಿಸಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 