ಆಥರ್ಿಕ ಪರಿಸ್ಥಿತಿಯಿಂದ ಶಿಕ್ಷಣ ಬಿಡದೇ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಮಾನ್ವಿ
ಲೋಕದರ್ಶನ ವರದಿ
ಗದಗ: ಸ್ಲಂ ಪ್ರದೇಶದ ವಿದ್ಯಾಥರ್ಿಗಳು ಅನೇಕ ಸಮಸ್ಯೆಗಳನ್ನು ಮತ್ತು ಸವಾಲಗಳನ್ನು ಸ್ವ್ವೀಕರಿಸಿ ಸ್ಲಂ ಪ್ರದೇಶಗಳಲ್ಲಿ ಶಿಕ್ಷಣ ಕಲೆಯಲು ವಾತಾವರಣ ಇಲ್ಲದೇ ಇದ್ದರು ಸಹ ಇಂತಹ ಸ್ಥಿಯಲ್ಲಿಯು ಕೊಡಾ ತಮ್ಮ ಶಿಕ್ಷಣವನ್ನು ಮುಂದುವರೆಸಿ ಇವತ್ತು ನಮ್ಮ ಸ್ಲಂ ಪ್ರದೇಶದ ಶಾಲಾ-ಕಾಲೇಜಿನ ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಿರುವುದು ನಮ್ಮಲ್ಲೆರಿಗೊ ಹೆಮ್ಮೆಯ ವಿಷಯ, ನಮ್ಮ ಸ್ಲಂ ಪ್ರದೇಶದ ಪ್ರತಿಭಾವಂತ ವಿದ್ಯಾಥರ್ಿಗಳು ತಮ್ಮ ಆಥರ್ಿಕ ಪರಿಸ್ಥಿಯಿಂದ ಶಿಕ್ಷಣವನ್ನು ಕೈಬಿಡದೇ ಸಕರ್ಾರದ ಶೈಕ್ಷಣಿಕ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆದು ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿಯ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಕರೆ ನೀಡಿದರು.
ಅವರು ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬೆಟಗೇರಿಯ ಡಾ: ಬಿ.ಆರ್. ಅಂಬೇಡ್ಕರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸ್ಲಂ ಪ್ರದೇಶದ ಪ್ರತಿಭಾವಂತ ವಿದ್ಯಾಥರ್ಿಗಳೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸಕರ್ಾರದಿಂದ ಬಡ ಕುಟುಂಬದ ವಿದ್ಯಾಥರ್ಿಗಳು ಶಿಕ್ಷಣದಿಂದ ವಂಚಿತವಾಗಬಾರದೆಂಬ ಉದ್ದೇಶದಿಂದ ಎಲ್ಲಾ ಸಮುದಾಯಗಳ ವಿದ್ಯಾಥರ್ಿಗಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ನಮ್ಮ ಸ್ಲಂ ಪ್ರದೇಶದ ಜನರಿಗೆ ಇದರೆ ಮಾಹಿತಿಯ ಕೊರತೆಯಿಂದ ಹಾಗೂ ಅವರ ಆಥರ್ಿಕ ಪರಿಸ್ಥಿಯಿಂದ ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಿರುವುದ್ದರಿಂದ ನಮ್ಮ ಸ್ಲಂ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೊಲಿಕಾಮರ್ಿಕರಾಗಿ ಕೆಲಸಕ್ಕೆ ಸೇರುತ್ತಿರುವುದು ದುಖಕರ ಸಂಗತಿ, ಹಾಗಾಗಿ ನಮ್ಮ ಪ್ರದೇಶದ ನಿವಾಸಿಗಳು ಸಕರ್ಾರದ ಶಿಕ್ಷಣ ಯೋಜನೆಗಳ ಕುರಿತು ಆಯಾ ಇಲಾಕೆಗಳಲ್ಲಿ ಮಾಹಿತಿಯನ್ನು ಪಡೆದು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕಲಿಯಲು ಸಹಕಾರ ನೀಡುವ ಜೂತೆಗೆ ಅವರ ಮುಂದಿನ ಉಜ್ವಲ್ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಹಕಾರಿಯಾಗಬೇಕು.
ಅದೇ ರೀತಿ ಇಲಾಖೆಯ ಅಧಿಕಾರಿಗಳು ಕೊಳಗೇರಿ ಪ್ರದೇಶಗಳಲ್ಲಿ ಶೈಕ್ಷಣಿಕ ಯೋಜನೆಗಳ ಕುರಿತು ಅರಿವು ಮೋಡಿಸುವ ಕಾಯರ್ಾಗಳನ್ನು ನಡೆಸಿದರೆ ನಮ್ಮ ಸ್ಲಂ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದೆಂದು ಹೇಳಿದರು, ಪ್ರತಿ ವರ್ಷದಂತೆ ಈ ವರ್ಷವು ಸಮಿತಿಯಿಂದ ಸ್ಲಂ ಪ್ರದೇಶದ ಪ್ರತಿಭಾವಂತ ವಿಧ್ಯಾಥರ್ಿಗಳೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಗಿದ್ದು ವಿಧ್ಯಾಥರ್ಿಗಳ ಮುಂದಿನ ಭವಿಷ್ಯ ಉಜ್ವಲ್ವಾಗಲಿ ಎಂದು ಶುಭ ಹಾರೈಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರದ ಯೋಜನಾ ನಿವರ್ಾಹಕಿ ಸುನಂದಾ ಹೊಳ್ಯಾಳ ಮಾತನಾಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿಧ್ಯಾಥರ್ಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾಶ್ರೀ ಯೋಜನೆಡಿಯಲ್ಲಿ ಸಹಾಯಧನ ನೀಡಲಾಗುತ್ತಿದೆ.
ವೇದಿಕೆಯ ಮೇಲೆ ಸ್ಲಂ ಸಮಿತಿಯ ಗೌರವಾಧ್ಯಕ್ಷರಾದ ಅಶೋಕ ಮ್ಯಾಗೇರಿ, ಉಪಾಧ್ಯಕ್ಷರಾದ ರವಿಕುಮಾರ ಬೆಳಮಕರ, ಖಜಾಂಚಿಯಾದ ಮಂಜುನಾಥ ತಳವಾರ, ಸ್ಲಂ ಸಮಿತಿಯ ಮುಖಂಡರಾದ ಇಬ್ರಾಹಿಂ ಮುಲ್ಲಾ, ಅಬುಬಕರ ಮಕಾನದಾರ, ಮಹಿಳಾ ಸಮಿತಿ ಮುಖಂಡರಾದ ಪರವೀನಬಾನು ಹವಾಲ್ದಾರ, ಮದರ್ಾನಬಿ ಬಳ್ಳಾರಿ ಉಪಸ್ಥಿತರಿದ್ದರು, ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಪ್ರತಿಭಾವಂತ ವಿಧ್ಯಾಥರ್ಿಗಳಿಗೆ ಸಮಿತಿಯಿಂದ ಸನ್ಮಾನಿಸಲಾಯಿತು, ರೇಶ್ಮಾ ಪೇಂಡಾರಿ, ಸುಫಿಯಾ ಹಲರ್ಾಪೂರ, ವಂದನಾ ಶ್ಯಾವಿ, ಕಮಲಾ ಚಲವಾದಿ, ಹಾಗೂ ನೂರಾರು ಸ್ಲಂ ನಿವಾಸಿಗಳು ಮತ್ತು ವಿಧ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸ್ಲಂ ಸಮಿತಿ ಉಪಾಧ್ಯಕ್ಷರಾದ ರವಿಕುಮಾರ ಬೆಳಮಕರ ಕಾರ್ಯಕ್ರಮ ನಿರೂಪಿಸಿದರು.ಮಂಜುನಾಥ ತಳವಾರ ವಂದಿಸಿದರು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 