ಮುಧೋಳ ರೈತರು ಬ್ಯಾಂಕಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಮಠದ
ಮುಧೋಳ 11: ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಅಭಿವೃಧ್ಧಿಗಾಗಿ ಎಲ್ಲಾ ಹಳ್ಳಿಗಳು ನಮ್ಮದೇ ಎಂಬ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಬ್ಯಾಂಕ್ ಮೂಲಕ ವಿವಿಧ ಸಾಲ ಸೌಲಭ್ಯಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಕೆಎಚ್ಎಫ್ಡಿಸಿ. ಬ್ಯಾಂಕಿನ ಕೃಷಿ ಸಾಲದ ಅಧಿಕಾರಿ ರಾಜಶೇಖರ ಮಠದ ಹೇಳಿದರು. ತಾಲೂಕಿನ ಜೀರಗಾಳ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಖಾಸಗಿ ಬ್ಯಾಂಕುಗಳಲ್ಲಿ ದೇಶದ ಮೊದಲನೆಯದಾಗಿ ಆರಂಭ ಆಗಿರುವ ನಮ್ಮ ಬ್ಯಾಂಕು, ಗ್ರಾಮೀಣ ಜನತೆಗೆ ಸುಲಭ ಬ್ಯಾಂಕ್ ಸೇವೆ, ಸೌಲಭ್ಯ ಗಳ ಬಗ್ಗೆ ಅರಿವು ಮೂಡಿಸುವದು, ಹಣಕಾಸಿನ ಜ್ಞಾನ ಮತ್ತು ವಿವಿಧ ಅಧುನಿಕ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವದು ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು. ಗ್ರಾಮೀಣ ಜನತೆಗೆ ಅನುಕೂಲ ಆಗಲು ಉಳಿತಾಯ ಖಾತೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃಧ್ಧಿ ಯೋಜನೆ, ಕೃಷಿ ಸಾಲ, ವಾಹನ, ವ್ಯಾಪಾರಕ್ಕಾಗಿ ಸಾಲ, ಕೃಷಿ, ಚಿನ್ನದ ಮೇಲಿನ ಸಾಲ, ನೆಟ್, ಮೊಬೈಲ್ ಬ್ಯಾಂಕಿಂಗ್ ಇತರೆ ಮಾಹಿತಿ ಕುರಿತಾಗಿ ಬ್ಯಾಂಕಿನ ಶಾಖೆಯ ಮುಖ್ಯ ವ್ಯವಸ್ಥಾಪಕ ಸಚೀನ ಕಾವೇರಿ ವಿವರಿಸಿದರು. ತಾಲೂಕಿನ ಯಡಹಳ್ಳಿ, ರನ್ನ ಬೆಳಗಲಿ ಗ್ರಾಮದಲ್ಲೂ ಎಲ್ಲಾ ಹಳ್ಳಿಗಳು ನಮ್ಮದೇ ಎಂಬ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ವಿವಿಧ ಗ್ರಾಮಗಳಿಗೂ ಇದನ್ನು ವಿಸ್ತರಿಸಿ ಬ್ಯಾಂಕಿನ ವ್ಯವಸ್ಥೆ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಸಚಿನ ತಿಳಿಸಿದರು.
ಗ್ರಾಮದ ಪ್ರಮುಖರಾದ ದುಂಡಪ್ಪ ಲಕ್ಕಂ, ಬಸನಗೌಡ ಪಾಟೀಲ, ಕಲ್ಲಪ್ಪ ಪಾಟೀಲ, ರಮೇಶ ಲಕ್ಕಂ, ರಮೇಶ ಹೊರಗಿನಮನಿ, ಗೋವಿಂದಪ್ಪ ಲಕ್ಕಂ, ಸಿಬ್ಬಂದಿ ಹಣಮಂತ ವಾಲಿಕಾರ, ಮಂಜುನಾಥ ತೇಲಿ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 