ಮುದ್ದೇಬಿಹಾಳ: ಹೆಜ್ಜೇನು ದಾಳಿ 20ಕ್ಕೂ ಹೆಚ್ಚು ಜನರಿಗೆ ಗಾಯ
ಲೋಕದರ್ಶನ ವರದಿ
ಮುದ್ದೇಬಿಹಾಳ 15: ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ದನದ ಬಾಜರ್ನಲ್ಲಿ ನಡೆಯುತ್ತಿದ್ದ ತರಕಾರಿ ಸಂತೆಯಲ್ಲಿ ಏಕಾಏಕಿ ಹೆಜ್ಜೆನುಗಳು ದಾಳಿ ಇಟ್ಟ ಪರಿಣಾಮ ಮಕ್ಕಳು, ಮಹಿಳೆಯರು, ವ್ಯಾಪಾರಸ್ಥರು ಸೇರಿ 15-20 ಜನರು ಗಾಯಗೊಂಡ ಘಟನೆ ರವಿವಾರ ನಡೆದಿದೆ. ಈ ಘಟನೆಯಿಂದ ಬೆಚ್ಚಿಬಿದ್ದ ಅನೇಕರು ತಪ್ಪಿಸಿಕೊಳ್ಳಲು ಹೋಗಿ ತಗ್ಗು ದಿನ್ನೆ ಎಡವಿ ಬಿದ್ದರು.ಕೆಲವರು ತಲೆಮೇಲೆ ತಟ್ಟು, ಚೀಲ ಹಾಕಿ ಮುಖ ಮುಚ್ಚಿಕೊಂಡು ಪಾರಾಗಲು ಯತ್ನಿಸಿದರು. ಜೇನುಹುಳು ಕಡಿತಕ್ಕೊಳಗಾದ ತೀವ್ರ ನೋವಿನಿಂದ ಸಂಕಟಪಡುತ್ತಿದ್ದ ಮಕ್ಕಳು, ಮಹಿಳೆಯರನ್ನು ಅಂಬ್ಯುಲೆನ್ಸ್ ಮೂಲಕ ತಾಲೂಕು ಸಕರ್ಾರಿ ಆಸ್ಪತ್ರೆಗೆ ಕರೆತಂದು ತುತರ್ು ಚಿಕಿತ್ಸೆ ಕೊಡಿಸಲಾಯಿತು. ಮಹ್ಮದರಫೀಕ ಬಾಗವಾನ, ಅಲ್ಲಾಭಕ್ಷ ಸಾಲಿಮನಿ, ಜಾಕೀರ ಸಾಲಿಮನಿ, ಜಯಶ್ರೀ ತಳವಾರ, ಬಾನು ಮುಲ್ಲಾ, ಶ್ಯಾಮಲಾಹೆಬ್ಬಾಳ ಮತ್ತಿತರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿರಬೇಕಿದ್ದ ವೈದ್ಯರು ಇಲ್ಲದೆ ಇರುವುದರಿಂದ ಗಾಯಾಳುಗಳಿಗೆ ಚಕಿತ್ಸೆ ನೀಡಲು ಯಾರೂ ಇರಲಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿ ಗಾಯಾಳುಗಳ ಜೊತೆ ಬಂದಿದ್ದವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ತೆರಳಿದ್ದ ಡಾ.ಸಂಗಮೇಶ ಪಟ್ಟಣದ ಅವರನ್ನೇ ಮರಳಿ ಕರೆಸಿಕೊಂಡು ಗಾಯಾಳುಗಳಿಗೆ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲಾಯಿತು. ಸಂಜೆ ಆಸ್ಪತ್ರೆಗೆ ತಹಸೀಲ್ದಾರ್ ಜಿ.ಎಸ್.ಮಳಗಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯದ ಮಾಹಿತಿ ಪಡೆದುಕೊಂಡರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 