ಹಾಲು ಪೂರೈಸುವನಿಂದಲೇ ಹಾಲಿನ ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಬಹಿರಂಗ
ಬೆಂಗಳೂರು, ಅ.09 (ಹಿ.ಸ) - ಉದ್ಯಾನ
ನಗರಿಯಲ್ಲಿ ಒಂದಲ್ಲಾ,ಒಂದು ರೀತಿಯಲ್ಲಿ ಕಳ್ಳತನ
ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ, ಇದೀಗ ಕಳೆದ ಒಂದು
ವಾರದಿಂದ ಕಳ್ಳನೊಬ್ಬ ಹಾಲು ಕದಿಯುತ್ತಿರುವ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ವಿದ್ಯಾರಣ್ಯಪುರದಲ್ಲಿರುವ ಹಾಲಿನ ಅಂಗಡಿಯಿಂದ
ಹಾಲುಗಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರವೀಣ್ ಎಂಬುವರ ಮಾಲೀಕತ್ವದ ಹಾಲಿನ ಮಳಿಗೆ ಇದಾಗಿದ್ದು, ಇತ್ತೀಚೆಗೆ ಹಾಲಿನ ಬಾಕ್ಸ್ ಕಡಿಮೆ ಪೂರೈಕೆ ಮಾಡಲಾಗುತ್ತಿದೆ ಎಂದು ಸರಬರಾಜು ಮಾಡುತ್ತಿದ್ದವನ
ಜೊತೆ ಮಾಲೀಕ ಪ್ರವೀಣ್ ಜಗಳವಾಡುತಿದ್ದರು.
ಈ
ಹಿನ್ನೆಲೆ ಹಾಲು ಸರಬರಾಜು ಮಾಡುತ್ತಿದ್ದವನೇ
ಕಳ್ಳತನ ಮಾಡಿದ್ದಾನೆ ಎಂದು ಪ್ರವೀಣ್ ವಿದ್ಯಾರಣ್ಯಪುರ
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇನ್ನು ಸಿಸಿಟಿವಿ ಚೆಕ್ ಮಾಡಿದಾಗ ಹಾಲುಗಳ್ಳನ
ಕೃತ್ಯ ಬಯಲಾಗಿದೆ. ಇನ್ನು ವಿದ್ಯಾರಣ್ಯಪುರ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 