ಹಾಲು ಪೂರೈಸುವನಿಂದಲೇ ಹಾಲಿನ ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಬಹಿರಂಗ
ಬೆಂಗಳೂರು, ಅ.09 (ಹಿ.ಸ) - ಉದ್ಯಾನ
ನಗರಿಯಲ್ಲಿ ಒಂದಲ್ಲಾ,ಒಂದು ರೀತಿಯಲ್ಲಿ ಕಳ್ಳತನ
ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ, ಇದೀಗ ಕಳೆದ ಒಂದು
ವಾರದಿಂದ ಕಳ್ಳನೊಬ್ಬ ಹಾಲು ಕದಿಯುತ್ತಿರುವ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ವಿದ್ಯಾರಣ್ಯಪುರದಲ್ಲಿರುವ ಹಾಲಿನ ಅಂಗಡಿಯಿಂದ
ಹಾಲುಗಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರವೀಣ್ ಎಂಬುವರ ಮಾಲೀಕತ್ವದ ಹಾಲಿನ ಮಳಿಗೆ ಇದಾಗಿದ್ದು, ಇತ್ತೀಚೆಗೆ ಹಾಲಿನ ಬಾಕ್ಸ್ ಕಡಿಮೆ ಪೂರೈಕೆ ಮಾಡಲಾಗುತ್ತಿದೆ ಎಂದು ಸರಬರಾಜು ಮಾಡುತ್ತಿದ್ದವನ
ಜೊತೆ ಮಾಲೀಕ ಪ್ರವೀಣ್ ಜಗಳವಾಡುತಿದ್ದರು.
ಈ
ಹಿನ್ನೆಲೆ ಹಾಲು ಸರಬರಾಜು ಮಾಡುತ್ತಿದ್ದವನೇ
ಕಳ್ಳತನ ಮಾಡಿದ್ದಾನೆ ಎಂದು ಪ್ರವೀಣ್ ವಿದ್ಯಾರಣ್ಯಪುರ
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇನ್ನು ಸಿಸಿಟಿವಿ ಚೆಕ್ ಮಾಡಿದಾಗ ಹಾಲುಗಳ್ಳನ
ಕೃತ್ಯ ಬಯಲಾಗಿದೆ. ಇನ್ನು ವಿದ್ಯಾರಣ್ಯಪುರ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 