ಹೂವಿನಹಡಗಲಿ 07: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆರ್ ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಮಹಾದುರಂದಲ್ಲಿ 11ಜನ ಸಾವುನ್ನು ಅಪ್ಪಿದ್ದು. ಮೃತರ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರ ಸರ್ಕಾರಿ ನೌಕರಿ ನೀಡಲಿ ಎಂದು ವಿಜಯನಗರ ಬಿಜೆಪಿ ಪಕ್ಷದ ಜಿಲ್ಲಾ ಮುಖಂಡ ಎಂ ಬಿ ಬಸವರಾಜ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆ ಶುಕ್ರವಾರ ಮಾತನಾಡಿ. ಕಾಲ್ತುಳಿತದಲ್ಲಿ ಮೃತರು ತಮ್ಮ ಕುಟುಂಬಗಳಿಗೆ ಆಶ್ರಯ ನೀಡುವುರಾಗಿದ್ದರು. ಹಾಗಾಗಿ ಸಿದ್ದರಾಮಯ್ಯನವರು ಸರ್ಕಾರಿ ಕೆಲಸ ನೀಡಿ ಅವರ ಕುಟುಂಬವನ್ನು ರಕ್ಷಣೆ ಮಾಡಬೇಕು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪೋಲಿಸ್ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಿ. ತಾಮಗೆನೂ ಗೋತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಹಾಗಾದರೆ ಇವರ ಅನುಮತಿ ಇಲ್ಲದೆ ವಿಜಯೋತ್ಸವ ನಡೆಯಿತೆ. ಹಾಗಾದರೆ ತಾಮುಂದು ನಾಮುಂದು ಬಂದು ವೇದಿಕೆಯಲ್ಲಿ ಹೇಗೆ ಕುಳಿತರು. ಸಿಎಂ ಡಿಸಿಎಂ.ಕಾಲ್ತುಳಿತಕ್ಕೆ ಸಿಲುಕಿ 11ಜನ ಸಾವೀಗೀಡಾದ ಘಟನೆ ನೋಡಿದರೆ ರಾಜ್ಯದ ಕಾನೂನು ಭದ್ರತಾ ವ್ಯವಸ್ಥೆ ಹಾಳಾದೆ. ಇತ್ತ ಗೃಹ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಗೊಂಬೆಯಾಗಿರುವುದು ಅಕ್ಷರಶಃ ಸತ್ಯ. ಏಕೆಂದರೆ ಗೃಹ ಸಚಿವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ.ಆರ್ ಸಿಬಿ ತಂಡದ ಆಟಗಾರರಿಗೆ ವಿಶೇಷ ಅಭಿನಂದನಾ ಸಮಾರಂಭಕ್ಕೆ ಪೋಲಿಸರು ಅನುಮತಿ ಕೊಟ್ಟಿರಲಿಲ್ಲ.
ಇದೇಲ್ಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ತಂತ್ರ ರೂಪಿಸಿ ಅಮಾಯಕರ ಬಲಿ ತೆಗೆದುಕೊಂಡ ತಾವು ಏನು ಮಾಡಿಲ್ಲ ಎಂಬಂತೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿರುವ ಸಿದ್ದರಾಮಯ್ಯ ಸರ್ಕಾರ ಜನಪರವಾದ ಆಡಳಿತ ನಡೆಸಲು ವಿಫಲವಾಗಿದೆ.ಕಾಂಗ್ರೆಸ್ ಪಕ್ಷ ಕುಂಭ ಮೇಳದ ಆಯೋಜನೆ ಭದ್ರತೆ ಬಗ್ಗೆ ಹಗರುವಾಗಿ ಮಾತನಾಡಿತ್ತು.ಆದರೆ ಕುಂಭ ಮೇಳದ ಆಯೋಜನೆ ಭದ್ರತೆಯ ಬಗ್ಗೆ ವಿಶ್ವ ಮಟ್ಟದಲ್ಲಿ ಯೋಗಿ ಆದಿತ್ಯನಾಥ್, ನರೇಂದ್ರ ಮೋದಿಜಿಯವರ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.ವಿಜಯೋತ್ಸವ ಆಚರಣೆಯನ್ನು ಆಯೋಜಿಸಲು ವಿಫಲವಾಗಿರುವ ರಾಜ್ಯ ಸಿದ್ದರಾಮಯ್ಯ ಸರ್ಕಾರ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರವನ್ನು ನೀಡುತ್ತಾರೆ.ಎಂದು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.